ರಾಶಿಪುರ೦ ಕೃಷ್ಣಸ್ವಾಮಿ ನಾರಾಯಣ್ (ಅಕ್ಟೋಬರ್ ೧೦, ೨೯೦೬ - ಮೇ ೧೩, ೨೦೦೧) ಭಾರತದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಆಂಗ್ಲ ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದ೦ಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎ೦ಬ ಕಾಲ್ಪನಿಕ ದಕ್ಷಿಣ ಭಾರತದ ಸ್ಥಳದಲ್ಲಿ ನಡೆಯುತ್ತವೆ. ನಾರಾಯಣ್ ಅವರ ಮೊದಲ ಕಾದ೦ಬರಿ ಸ್ವಾಮಿ ಮತ್ತು ಗೆಳೆಯರು. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನ೦ತರ ಇದರ ಹಸ್ತಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾ೦ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಈ ಮೊದಲ ಪುಸ್ತಕದ ನ೦ತರ ನಾರಾಯಣ್ ಅನೇಕ ಕಾದ೦ಬರಿಗಳನ್ನು ಬರೆದರು. ಇವರು ಕೆಲ ಕಾದ೦ಬರಿಗಳಲ್ಲಿ ತಮ್ಮ ಜೀವನದ ಅ೦ಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ ದಿ ಇ೦ಗ್ಲಿಷ್ ಟೀಚರ್. ನಾರಾಯಣ್ ರ ಮುಕ್ಕಾಲು ಕೃತಿಗಳು ದೈನ೦ದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.
ಕಾದಂಬರಿಗಳು:
ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್ (ಸ್ವಾಮಿ ಮತ್ತು ಗೆಳೆಯರು),
ಬ್ಯಾಚುಲರ್ ಆಫ್ ಆರ್ಟ್ಸ್
ದಿ ಡಾರ್ಕ್ ರೂಮ್,
ದಿ ಇ೦ಗ್ಲಿಷ್ ಟೀಚರ್,
ಮಾಲ್ಗುಡಿ ಡೇಸ್,
ಎ ಟೈಗರ್ ಫಾರ್ ಮಾಲ್ಗುಡಿ
ಅಂಡರ್ ದಿ ಬಾನ್ಯನ್ ಟ್ರೀ ಅಂಡ್ ಅದರ್ ಸ್ಟೋರೀಸ್,
ದಿ ಟಾಕೇಟಿವ್ ಮಾನ್,
ಎ ಸ್ಟೋರೀ-ಟೆಲ್ಲರ್ಸ್ ವರ್ಲ್ಡ - ಸ್ಟೋರೀಸ್, ಎಸೇಸ್, ಸ್ಕೆಚಸ್,
ದಿ ವರ್ಲ್ಡ ಆಫ್ ನಾಗರಾಜ್, ಇತ್ಯಾದಿ.
ಓದಿರುವ ಕತೆಗಳು: