ವಂದೇ ಶಂಭು ಉಮಾಪತಿಂ ಸುರಗುರುಂ

ವಂದೇ ಜಗತ್ ಕಾರಣಂ

ವಂದೇ ಪನ್ನಗ ಭೂಷಣಂ ಮೃಗಧರಂ

ವಂದೇ ಪಶುನಾಂ ಪತಿಂ

ವಂದೇ ಸೂರ್ಯ ಶಶಾಂಕ ವಹ್ನಿ ನಯನಂ

ವಂದೇ ಮುಕುಂದಪ್ರಿಯಂ

ವಂದೇ ಭಕ್ತ ಜನಾಶ್ರಯಂಚ ವರದಂ

ವಂದೇ ಶಿವಂ ಶಂಕರಂ ||



ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ |

ಮಹಾಮಹಿಮ ಮಂಜುನಾಥ ನಮೋ ಎನ್ನುವೆ ||

ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ |

ನೇತ್ರಾವತಿ ನದಿಯಿದುವೆ ಆ ಸುರನದಿ ||

||ಪ||

ಧರ್ಮಪಾಲ ದಯಾಶೀಲ ಮಂಜುನಾಥನೆ |

ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ ||

ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ |

ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ ||

||ನ್ಯಾಯ ನೀತಿ ಮೂರ್ತಿವೆತ್ತ||

ಅಣ್ಣಪ್ಪ ಗುರುವೆ ನಿನಗೆ ಶರಣು ಎನ್ನುವೆ |

ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ ||

ನ್ಯಾಯ ಮಾರ್ಗದಲ್ಲಿ ನಡೆದು ಧನ್ಯನಾಗುವೆ |

ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ ||

||ನ್ಯಾಯ ನೀತಿ ಮೂರ್ತಿವೆತ್ತ||

ಧರ್ಮವನ್ನು ರಕ್ಷಿಸುವ ಶಕ್ತಿ ನೀಡು |

ನಿನ್ನ ನಂಬಿ ಬಾಳುವ ಭಕ್ತಿ ನೀಡು ||

ಸತ್ಯವೆ ಗೆಲ್ಲುವ ನ್ಯಾಯ ನೀಡು |

ನಮ್ಮ ಮನದ ಗುಡಿಯಲ್ಲಿ ವಾಸ ಮಾಡು ||

||ನ್ಯಾಯ ನೀತಿ ಮೂರ್ತಿವೆತ್ತ||