ಸ್ವಾಮಿಯೇ ಶರಣು ಅಯ್ಯಪ್ಪ..

ಅಯ್ಯನೇ ಶರಣು ಅಯ್ಯಪ್ಪ....

ಮಾಲೆಯ ಕೊರಳಲಿಟ್ಟು..

ವೃತ ನಿಯಮದ ಮುಡಿಯುಟ್ಟು..

ಗಿರಿ ಕಂದರವ ದಾಟಿದೆವು..

ಅಯ್ಯನ ಕಾಣಲು || ಸ್ವಾಮಿಯೆ |


ಹೊಸಮಲೆ ಹೊನ್ನುಮಲೆ ಪುಣ್ಯಮಲೆ ಶಬರಿಮಲೆ |

ಮಣಿಕಂಠನಿರುವ ಮಲೆ

ಭಕ್ತರು ಶತಕೋಟಿ ಬರುವಾಗ

ಮುಕ್ತಿಯ ಪಥತೋರಿ ಶರಣು ಎನ್ನುವ ಮಲೆ

ಸ್ವಾಮಿ ಶರಣು ಎನ್ನುವ ಮಲೆ ||

ನನ್ನಯ್ಯ ಜಗದಯ್ಯ ನನ್ನಯ್ಯ ಅಯ್ಯಪ್ಪನೇ |

ಶರಣು ಶರಣು ಶರಣು ಶರಣು ಸ್ವಾಮಿಯೆ ||

||ಹೊಸಮಲೆ ||

ಜಗದೀಶನಾ ಮಗನೇ | ಕಲಿಕಾಲ ಕಂಡವನೇ |

ಪಂಪಾನದಿ ತೀರದಿ | ಜನಿಸಿದ ಅಯ್ಯನಯ್ಯನೇ ||

ಹರಿಹರ ನಂದನನೇ | ಭುವಿಗೆ ನೀ ಬಂದವನೇ |

ಹೊಸ ಯುಗವ ನೀನು ತಂದೆಯಲ್ಲೋ ||

||ನನ್ನಯ್ಯ ಜಗದಯ್ಯ||

ಧನಸ್ಸಿನ ವೀರನಾಗಿ | ವೀರಮಣಿಕಂಠನಾಗಿ |

ಹುಲಿವಾಹನನಾಗಿ | ಸ್ವಾಮಿ ಮಹಿಷಿಮರ್ಧನನಾಗಿ ||

ಏಳುಮಲೆ ಏರಿದೆಯ | ಶಬರಿಮಲೆ ಸೇರಿದೆಯ |

ಭಕ್ತರ ಮನದಲ್ಲಿ ನೆಲೆಸಿದೆಯ||

|| ನನ್ನಯ್ಯ ಜಗದಯ್ಯ ||

ಬಲು ಕಟ್ಟುನಿಟ್ಟಾಗಿ ಬಂದೆವು |

ಕರಿಮಲೆ ನೀಲಿಮಲೆ ಏರುತ್ತ ಬಂದೆವು |

ಹದಿನೆಂಟು ಹಂತಗಳ ಹತ್ತುತ್ತಾ ಬಂದೆವು |

ಶರಣೆಂದು ಹೇಳಿ ಹಾಡುತ ಬಂದೆವು ||

ಮೋಕ್ಷ ಕೊಡು ಮುಕ್ತಿ ಕೊಡು |

ಸ್ಮರಿಸುವ ಶಕ್ತಿ ಕೊಡು |

ಸ್ವಾಮಿ ಭಕ್ತರಿಗೆ ಅಭಯ ನೀಡು ||

|| ನನ್ನಯ್ಯ ಜಗದಯ್ಯ ||

***