ಚಿತ್ರಕಲಾಮೇಳ (ART MELA)
“ಕಲೆ ಎನ್ನುವುದು ನಿನ್ನ ಚಿಂತನೆಗಳ ಸುತ್ತ ಎಳೆದಿರುವ ಒಂದುಗೆರೆ" ಎಂಬ ವಾಕ್ಯದಂತೆ ಸ್ನೇಹ ತಂಡ ಮಾಡಿಕೊಂಡು ಬಂದಿರುವ ಹಲವಾರು ಚಟುವಟಿಕೆಗಳಲ್ಲಿ ಚಿತ್ರಕಲಾಮೇಳವು ಒಂದು. ವಿಶ್ವವಿದ್ಯಾಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಶಿಕ್ಷಕರ ಮಾರ್ಗದರ್ಶನದೊಂದಿಗೆ ಈ ವೇದಿಕೆಯನ್ನು ಪ್ರಾರಂಭಮಾಡಿತು. ವಿದ್ಯಾರ್ಥಿಗಳ ಚಿತ್ರಕಲೆ ಮತ್ತು ಪ್ರತಿಭೆಗಳು ನಶಿಸಿ ಹೋಗಬಾರದೆಂದು ಹಾಗೂ ಅವರಲ್ಲಿರುವ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಸ್ನೇಹ ತಂಡದ ಸದಸ್ಯರು ಹಾಗೂ ಇತರ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಜೊತೆಗೂಡಿ ಚಿತ್ರಪಟ, ಕಲ್ಲಿನ ಚಿತ್ತಾಕೃತಿ ಇತ್ಯಾದಿ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುತ್ತಾ ಬಂದಿದೆ.
ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆ
ಹೆಮ್ಮಾರಿ ಕರೋನದಿಂದ ತಂಡದ ಸದಸ್ಯರೆಲ್ಲರೂ ತಮ್ಮ ಮನೆಗಳಲ್ಲಿ ಇದ್ದಾಗಲೂ ತಂಡದ ಅನುಪಸ್ಥಿತಿ ಕಾಲೇಜು ಆವರಣದಲ್ಲಿ ಕಾಡಬಾರದೆಂದು, ಸಾಮಾಜಿಕ ಜಾಲತಾಣಗಳಲ್ಲಿ ಜನಜನಿತವಾದ ಇನ್ಸ್ಟಾಗ್ರಾಮ್ ಮೂಲಕ ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ತಂಡದ ಹಿರಿಯ ಸದಸ್ಯರು ತೀರ್ಪುಗಾರರಾಗಿದ್ದು, ಮೊದಲ ಮೂರು ಸ್ಥಾನ ಪಡೆದ ಸ್ಪರ್ಧಾರ್ಥಿಗಳಿಗೆ ಸೂಕ್ತ ನಗದು ಬಹುಮಾನಗಳನ್ನು ಕೊಡಲಾಯಿತು.
ಪ್ರತಿಭಾವಂತ ಕಲೆಗಾರರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಹೀಗೆ ತಂಡದ ಸದಸ್ಯರು ತಮ್ಮ ಏಳಿಗೆಗಷ್ಟೇ ಅಲ್ಲದೆ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸ್ನೇಹ ತಂಡವು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ. ಇಂತಹ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ನೇಹತಂಡದ ವಿದ್ಯಾರ್ಥಿಗಳ ಮನೋಲ್ಲಾಸವನ್ನು ಹೆಚ್ಚಿಸುತ್ತಾ ಬಂದಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸುಂದರ ಪರಿಸರ, ಸಮರ್ಥ ಆಡಳಿತಗಾರರು, ಚುಕ್ಕಾಣಿ ಹಿಡಿದಿರುವ ವಿದ್ಯಾರ್ಥಿ ಸ್ನೇಹಿ ಕುಲಪತಿಗಳಾದ ಡಾ. ಮಹಾದೇವ ಬಿ. ಚೆಟ್ಟಿ ಪಾಲಕರ ಪ್ರೀತಿ ತೋರಿಸುತ್ತಿರುವ ಅಧ್ಯಾಪಕ ಹಾಗೂ ಇತರ ಸಿಬ್ಬಂದಿಗಳ ಮದ್ಯ ಸ್ನೇಹ ತಂಡವು ವರ್ಷ ವರ್ಷಕ್ಕೆ ಬೆಳೆಯುತ್ತಲಿದ್ದು ಸ್ನೇಹ ತಂಡದ ಸದಸ್ಯರಲ್ಲಿ ಧನ್ಯತಾ ಭಾವನೆ ಮೂಡಿದೆ.
ಅದೆ ರೀತಿ ಪ್ರತಿ ವರ್ಷವು ಸ್ನೇಹತಂಡದ ಸದಸ್ಯರನ್ನಾಗಿ ಮೊದಲನೆ ವರ್ಷದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.