ಜೀವನದಲ್ಲಿ ಯಾವುದು ಶಾಶ್ವತವಲ್ಲ ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ ಏಕೆಂದರೆ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಅದು ಖಂಡಿತ ಬದಲಾಗುತ್ತದೆ
ಬರೆದ ಅಕ್ಷರಗಳು ತಪ್ಪಾದರೆ ತಿದ್ದ ಬಹುದೇ ವಿನಹ ಬದುಕು ತಪ್ಪಾದರೇ ತಿದ್ದುವುದು ಬಲು ಕಷ್ಟ. ಬದುಕನ್ನು ತಪ್ಪಾಗದಂತೆ ಬರೆದುಕೊಳ್ಳಿ.
ಆಹಾರದಲ್ಲಿ ಭಕ್ತಿ ಬೆರೆಸಿದರೆ ಪ್ರಸಾದವಾಗುತ್ತದೆ, ನೀರಿನಲ್ಲಿ ಭಕ್ತಿ ಬೆರೆಸಿದರೆ ತೀರ್ಥವಾಗುತ್ತದೆ, ಮಾಡುವ ಕೆಲಸದಲ್ಲಿ ಶ್ರದ್ದೆ ಬೆರೆಸಿದರೆ ಯಶಸ್ಸು ನಮ್ಮದಾಗುತ್ತದೆ.
ನಾವು ಎಷ್ಟು ವಿದ್ಯೆ ಕಲಿತಿದ್ದೇವೆ ಎನ್ನುವುದಕ್ಕಿಂತ, ನಮ್ಮ ಬಳಿಯಿರುವ ವಿದ್ಯೆ ನಮಗೆ ಎಷ್ಟು ಸಂಸ್ಕಾರ ಕಲಿಸಿದೆ ಎನ್ನುವುದು ಮುಖ್ಯ.
ದೇಹದ ಮೇಲೆ ಬೀಳುವ ಪೆಟ್ಟಿಗಿಂತ, ನಂಬಿಕೆಯ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ.
ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆ ಇಲ್ಲದ ಹಕ್ಕಿಯಂತೆ.
ಒಳ್ಳೆಯ ಅಭಿಪ್ರಾಯಗಳು ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತವೆ ಎನ್ನುವುದಕ್ಕಿಂತ, ಭಿನ್ನಾಭಿಪ್ರಾಯಗಳನ್ನು ನಾವು ಎಷ್ಟು ಚೆನ್ನಾಗಿ ನಿವಾರಿಸಿಕೊಳ್ಳುತ್ತೇವೆ ಎಂಬುದರಲ್ಲಿ ಒಂದು ಒಳ್ಳೆಯ ಸಂಬಂಧಗಳು ಅವಲಂಬಿತವಾಗಿರುತ್ತದೆ.
ನಮ್ಮ ಯಶಸ್ಸಿನ ಹಿಂದೆ ಅದೆಷ್ಟೋ ಜನರ ಸಹಕಾರ ಹಾರೈಕೆಗಳು ಇರುತ್ತವೆ. ಅವರೆಲ್ಲರನ್ನೂ ನೆನಪಿಸಿಕೊಳ್ಳುತ್ತ, ಗೌರವಿಸುತ್ತ ಹೆಜ್ಜೆ ಹಾಕೋಣ.
ನಾವು ಹೆಚ್ಚಾಗಿ ಯಾರೊಂದಿಗಿರುತ್ತೇವೊ ಅಂತಹ ಜನರಿಂದ ನಮ್ಮ ನಡತೆ ಹಾಗೂ ಅಭ್ಯಾಸಗಳು ಪ್ರಭಾವಿತವಾಗಿರುತ್ತವೆ.
ಸಂತೋಷದ ಬದುಕನ್ನು ಅನುಭವಿಸಬೇಕಾದರೆ ಸ್ವಾರ್ಥ ಮತ್ತು ದ್ವೇಷದಿಂದ ಕೂಡಿದ ಮನೋಭಾವವನ್ನು ದೂರ ಇಡಬೇಕು. ಪ್ರೀತಿ-ಸ್ನೇಹಗಳೇ ಮೌಲ್ಯಯುತ ಜೀವನಕ್ಕೆ ಆಧಾರ.
ಮೃದುವಾದ ವರ್ತನೆ ಯಾವಾಗಲೂ ಬಲವಾದ ಸಂಬಂಧಗಳನ್ನು ಸೃಷ್ಟಿಸುತ್ತದೆ.
ಬದುಕೆಂದರೆ ಅದೊಂದು ಒಮ್ಮುಖ ದಾರಿಯಲ್ಲಿ ಸಾಗಬೇಕಾದ ವಿದ್ಯಮಾನ. ಹಿಂತಿರುಗಿ ನೋಡಬಹುದಾದರೂ ತಿರುಗಿ ಹೋಗಲಾಗದು. ಎಚ್ಚರದಿಂದ ಸಾಗೋಣ
ಮರದ ಬೆಳವಣಿಗೆಗೆ ಬೇರು ಮುಖ್ಯ, ಆದರೆ ಬೇರು ಕಾಣಿಸದು....! ಹಾಗೆಯೇ ಸಕಲ ಜೀವರಾಶಿಗಳಿಗೂ ಭಗವಂತನೇ ಮೂಲ...!! ಆದರೆ ಭಗವಂತನು ಕಾಣಿಸುವುದಿಲ್ಲ....!!!
ವ್ಯಕ್ತಿಯ ಪರಿಚಯವಾಗುವುದು ಅವರ ಹೆಸರಿನಿಂದ, ಆದರೆ ಅವರ ನೆನಪು ಉಳಿಯುವುದು ಅವರ ವ್ಯಕ್ತಿತ್ವದಿಂದ.
ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು.
ಮೌಲ್ಯ ಇಲ್ಲದ ವ್ಯಕ್ತಿಗಳೊಂದಿಗೆ ವಾದಿಸುವುದು, ಅವರ ಮಾತಿಗೆ ಸ್ಪಂದಿಸುವುದರಿಂದ ನಮ್ಮ ಮೌಲ್ಯವೂ ಕಡಿಮೆಯಾಗುತ್ತದೆ.
ವ್ಯಕ್ತಿ ಪರಿಸ್ಥಿತಿ ಕೈಗೊಂಬೆಯಾದಾಗ ಅವನಾಗಲಿ ಅವನ ನಿಜವಾದ ವ್ಯಕ್ತಿತ್ವ ಮಾತನಾಡುವುದಿಲ್ಲ. ಅವನು ಎದುರಿಸುತ್ತಿರುವ ಪರಿಸ್ಥಿತಿ - ಸಮಯ - ಸಂದರ್ಭಗಳು ಮಾತನಾಡುತ್ತವೆ.....
ಕಷ್ಟಗಳು ಬಂದಾಗ ಮಾತ್ರ ನಮಗೆ ಅರ್ಥ ಆಗೋದು, ನಮ್ಮ ಭಾವನೆಗಳನ್ನು ಆಲೋಚನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳವುದು ಎಷ್ಟು ಕಷ್ಟ ಅಂತ.
ನಿಜವಾದ ಸಂಬಂಧ ಹೃದಯದಿಂದ ಆಗ ಬೇಕೇ ಹೊರತು ಅವಶ್ಯಕತೆಗಳಿಂದಲ್ಲ... ಅನ್ಯರಿಗೆ ಗೌರವ ಕೊಡುವ ಗುಣ ನಮ್ಮಲ್ಲಿ ಇದ್ದಾಗ ಮಾತ್ರ ಅನ್ಯರಿಂದ ಗೌರವ ತೆಗೆದುಕೊಳುವುದಕ್ಕೆ ಸಾಧ್ಯ.
ಯಶಸ್ಸಿಗಾಗಿ ನಮ್ಮ ನೈಜ ತುಡಿತ ಎಷ್ಟಿದೆ ಎಂದು ಅರಿವಾಗುವುದು ಸೋಲಿನ ಬಳಿಕವೇ.
ಯಾವಾಗಲೂ ಬೇಸರವಿಲ್ಲದೇ ಕಾರ್ಯನಿರತನಾಗಿರುವವನು ಯಶಸ್ಸನ್ನು ಸಾಧಿಸುತ್ತಾನೆ.
ಮನೆಯಲ್ಲಿ ಕಣ್ಣಿಗೆ ಕಾಣುವ ಎಷ್ಟೇ ದೀಪಗಳು ಇದ್ರು ದೇವರ ಮುಂದೆ ಇಡೋ ದೀಪಕ್ಕೆ ಬೆಲೆ ಜಾಸ್ತಿ. ಹಾಗೆ, ಇಷ್ಟ ಪಡೋ ಮನಸ್ಸುಗಳು ಎಷ್ಟೇ ಇದ್ದರು ನಾವು ಇಷ್ಟ ಪಡೋ ಒಂದು ಮನಸ್ಸಿಗೆ ಬೆಲೆ ಜಾಸ್ತಿ.
ಎಲ್ಲಿ ನೆಮ್ಮದಿ ಇದೆಯೋ ಅಲ್ಲಿ ಬಡವನು ಕೂಡ ಶ್ರಿಮಂತನಾಗಿರುತ್ತಾನೆ.
ಎಂಥ ಹೆಮ್ಮರವೂ ಒಂದು ಕಾಲಕ್ಕೆ ಪುಟ್ಟ ಗಿಡವೇ ಆಗಿತ್ತು ಎಂಬುದನ್ನು ನಮ್ಮೆಲ್ಲ ಕೆಲಸಗಳ ಪ್ರಾರಂಭದಲ್ಲಿ ನೆನಪಿಸಿಕೊಳ್ಳೋಣ ಪುಟ್ಟ ಪುಟ್ಟ ಸಾಧನೆ ಮಾಡುತ್ತಲೇ ದೊಡ್ಡತನ ಪ್ರಾಪ್ತವಾಗುತ್ತದೆ.
ಕೊಡೆ ಮಳೆಯನ್ನು ನಿಲ್ಲಿಸುವುದಿಲ್ಲ. ಆದರೆ ಮಳೆಯನ್ನು ಎದುರಿಸುವ ಧೈರ್ಯ ತುಂಬುತ್ತದೆ. ಆತ್ಮ ವಿಶ್ವಾಸ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ಯಾವುದೇ ಸಮಸ್ಯೆ ಎದುರಿಸುವ ಶಕ್ತಿ ಕೊಡುತ್ತದೆ.
ಜೀವನದಲ್ಲಿ ನಾವು ಮಾಡುವ ನಿಜವಾದ ತಪ್ಪೆಂದರೆ, ತಪ್ಪಿನಿಂದ ಪಾಠ ಕಲಿಯದಿರುವುದು.
ಬದುಕಿನ ಪ್ರತಿ ಹೆಜ್ಜೆಯಲ್ಲೂ ಹೊಸ ಪಾಠಗಳು ಇರುತ್ತವೆ, ಕಲಿಯುವ ಆಸಕ್ತಿ ಬೇಕು.
ಕಲ್ಪನೆಯ ಸುಖದ ಹಿಂದೆ ಬಿದ್ದು ನಿರಾಸೆ ಆಗುವುದಕ್ಕಿಂತ, ವಾಸ್ತವದ ಬದುಕಿನ ಜೊತೆಗೆ ಸಾಗುವುದು ಒಳಿತು.
ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಭ್ರಮಿಸದೆ ವ್ಯಕ್ತಿತ್ವದ ಉನ್ನತೀಕರಣ ಮತ್ತು ವೈಯಕ್ತಿಕ ಸಾಧನೆಗೆ ಶ್ರಮಿಸಿದರೆ, ಲೋಕೋದ್ಧಾರ ತಾನಾಗಿಯೇ ಆಗುತ್ತದೆ.
ಸದಾಶಯದ ಕೆಲಸಕ್ಕೆ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಸಿಗದಿರಬಹುದು; ಆದರೆ ಮುಂದಿನ ಪ್ರಯತ್ನಕ್ಕೆ ಬೇಕಾದ ಅನುಭವವನ್ನಂತೂ ಅದು ನೀಡುತ್ತದೆ.
ಆನಂದವನ್ನು ಎಲ್ಲೋ ಶೋಧಿಸಬೇಕಿಲ್ಲ. ಜೀವನದ ಸಣ್ಣ ಪುಟ್ಟ ಸಂಗತಿಗಳಲ್ಲಿಯೂ ಅಗಾಧವಾದ ಆನಂದ ನೆಲೆಸಿದೆ. ಅದನ್ನು ನಮ್ಮದಾಗಿಸಿ, ಸ್ವೀಕರಿಸಿಕೊಳ್ಳುವ ಮನಸು ಬೇಕಷ್ಟೇ.
ಬದುಕಿನಲ್ಲಿ ಶೇಕಡಾ 95 ರಷ್ಟು ಸಮಸ್ಯೆಗಳು ಸೃಷ್ಟಿಯಾಗುವುದು ನಮ್ಮ ಮಾತಿನ ಧ್ವನಿಯಿಂದ. ಏನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಹೇಳುತ್ತೇವೆ ಎನ್ನುವುದೇ ಮುಖ್ಯ. ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ.
ಯಾವುದೇ ಕೆಲಸ ಮಾಡುವ ಮುನ್ನ ಅವಶ್ಯಕತೆ ಮತ್ತು ಸಾಧ್ಯತೆಗಳನ್ನು ಅಭ್ಯಸಿಸಿ ಮುನ್ನಡಿಯಿಟ್ಟರೆ ಅಸಾಧ್ಯವೆನಿಸಿದ್ದೂ ಸುಲಭದಲ್ಲಿ ಮುಗಿದಿರುತ್ತದೆ.
ಸಮಸ್ಯೆಗಳು ಬದುಕಿಗೆ ಅಡ್ಡಿಪಡಿಸುವ ತಡೆಗೋಡೆಗಳಲ್ಲ, ಸಾಗಬೇಕಾದ ಪಥದ ಮಾರ್ಗಸೂಚಿಗಳು.
ಮನುಷ್ಯರಲ್ಲಿ.... ಬದಲಾವಣೆ ಇರಬೇಕು.... ಆದರೆ... ಇನ್ನೊಬ್ಬರನ್ನು ಕಳೆದುಕೊಳ್ಳುವಷ್ಟು....ಬದಲಾಗಬಾರದು.
ಮುಕ್ತಚರ್ಚೆಯಿಂದಾಗಿ ತಪ್ಪು ಕಲ್ಪನೆಗಳು ದೂರವಾಗಿ ಶಾಂತಿ-ನೆಮ್ಮದಿ-ಸಹಕಾರದ ಮಾರ್ಗೋಪಾಯ ರೂಪುಗೊಳ್ಳುತ್ತದೆ; ದುಡುಕಿನ ಮಾತು ಸಮಸ್ಯೆ-ಸಂಕಷ್ಠಗಳನ್ನು ತಂದೊಡ್ಡುತ್ತದೆ.
ನೂರೆಂಟರ ಬದಲು ಒಂದು ಯೋಗ್ಯ ವಿಷಯದ ಕನಸು ಕಾಣುತ್ತ ಸಂಪೂರ್ಣ ತೊಡಗಿಕೊಂಡಾಗ ಯಶಸ್ಸು ಸಂತೋಷಗಳು ತಾವಾಗಿ ಬಂದು ಸೇರಿಕೊಳ್ಳುತ್ತವೆ.
ನಮ್ಮ ಹಿಂದೆ ಮುಂದೆ ಯಾರೆಲ್ಲ ಇದ್ದಾರೆ ಅನ್ನುವುದಕ್ಕಿಂತ ನಮ್ಮ ಜತೆಯಲ್ಲಿ ಇರುವವರು ಯೋಗ್ಯರಾಗಿರುವುದು ಮುಖ್ಯ. ಸದಾ ಸನ್ಮಿತ್ರರೊಡನೆ ವ್ಯವಹರಿಸೋಣ!
ಬಯಸಿದ್ದೆಲ್ಲಾ ಸಿಗಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದರೆ ಅನೇಕ ಅಸಂಗತಗಳು ಇಲ್ಲವಾಗುತ್ತವೆ. ಮಿತಿಯಲ್ಲಿದ್ದಷ್ಟೂ ಜೀವನ ಹಿತವನ್ನಿಸುತ್ತ ಸಾಗುತ್ತದೆ.
ಯಾವತ್ತೂ ಈಗಿರುವ ಸ್ಥಿತಿ ಶಾಶ್ವತವಲ್ಲ. ಮುಂದಿನ ಕ್ಷಣ ಒಳ್ಳೆಯದಿರಲಿ ಎಂಬ ಆಶಯದೊಂದಿಗೆ ಇಂದಿನ ಕೆಲಸದ ಗುಣಮಟ್ಟಕ್ಕೆ ಆದ್ಯತೆ ನೀಡೋಣ.
ಸಾಧನೆಯ ಬಳಿಕ ಮನುಷ್ಯ ಪ್ರಜ್ಞೆಯ ಅತೀ ಸಾಮಾನ್ಯ ಪ್ರತಿಕ್ರಿಯೆ ಎಂದರೆ ಸಂತೃಪ್ತಿಯಲ್ಲ; ಬದಲು ಇನ್ನಷ್ಟು ಸಾಧನೆಗಾಗಿ ಹಾತೊರೆಯುವಿಕೆ.
ಜೀವನದಲ್ಲಿ ನೀವು ಎಡವಿದರೂ ಚಿಂತೆ ಬೇಡ, ಆಗಲೂ ನೀವು ಒಂದು ಹೆಜ್ಜೆ ಮುಂದೆ ಹೋಗಿರುತ್ತೀರಿ. ಇದ್ದಲ್ಲೇ ಇರುವುದಕ್ಕಿಂತ ಅದೇ ಉತ್ತಮ.
ಅಗತ್ಯ, ಅನಿವಾರ್ಯತೆಗಳು ಹೊಸ ದಾರಿಗಳನ್ನು ತೋರುತ್ತವೆ. ಅನುಭವಗಳು ಹೊಸ ಪಾಠಗಳನ್ನು ಕಲಿಸುತ್ತವೆ.
ನಮ್ಮ ಸಮಸ್ಯೆಗಳ ಬಗ್ಗೆಯಷ್ಟೇ ಮಾತನಾಡುವುದು ನಮ್ಮ ಅತಿದೊಡ್ಡ ವ್ಯಸನ. ಅದರಿಂದ ಹೊರಬಂದು, ಸಂತೋಷದ ಬಗ್ಗೆ ಮಾತನಾಡುವುದು ಅಭ್ಯಾಸ ಮಾಡಿಕೊಳ್ಳಬೇಕು.
ಅಂದು ಜನರು ದುಡಿಮೆ ನಂಬಿ ಬದುಕುತಿದ್ದರು. ಅದಕ್ಕೆ ಜೀವನ ನೆಮ್ಮದಿಯಿಂದ ಕೂಡಿತ್ತು. ಇಂದು ಜನರು ದುಡ್ಡು ನಂಬಿ ಬದುಕುತ್ತಿದ್ದಾರೆ, ಅದಕ್ಕೆ ಎಲ್ಲೂ ನೆಮ್ಮದಿ ಸಿಗುತ್ತಿಲ್ಲ...
ಸಂತೋಷ, ನಂಬಿಕೆ ಎನ್ನುವವು ಮಾರಾಟಕ್ಕೆ ದೊರಕುವುದಿಲ್ಲ. ಸಂತೋಷವನ್ನು ಮನುಷ್ಯರ ಬಳಿ ಹಂಚಿಕೊಳ್ಳಬೇಕು. ನಂಬಿಕೆಯನ್ನು ಮನಸ್ಸಿನಿಂದ ಹಂಚಿಕೊಳ್ಳಬೇಕು.
ಹುಟ್ಟುತ್ತಲೇ ನಮಗೆ ಮಿತ್ರರೂ ಇರುವುದಿಲ್ಲ, ಶತ್ರುಗಳೂ ಇರುವುದಿಲ್ಲ. ನಮ್ಮ ವ್ಯಕ್ತಿತ್ವ ಮತ್ತು ವರ್ತನೆಗಳ ಮೂಲಕ ಅವೆಲ್ಲವೂ ಹುಟ್ಟಿಕೊಳ್ಳುತ್ತವೆ.
ನಾವು ತಾಳ್ಮೆಯಿಂದ ಯೋಚಿಸಿ ಯೋಜಿಸಿದ ನಿರ್ಧಾರಗಳೇ, ನಮ್ಮ ಜೀವನಕ್ಕೆ ಮುನ್ನುಡಿ ನೀಡುವ ನಿರ್ಧಾರಗಳು.
ಪ್ರತಿ ಕಷ್ಟವನ್ನೂ ಒಂದು ಸದಾವಕಾಶವನ್ನಾಗಿ ಬದಲಾಯಿಸಿಕೊಳ್ಳಲು ಆಶಾವಾದಿಗಳಿಗೆ ಮಾತ್ರ ಸಾಧ್ಯ.
ಬಿಳುಪಿಗೆ ಮಹತ್ವ ಬಂದಿದ್ದೇ ಕಪ್ಪಿನಿಂದ. ಸುಖಕ್ಕೊಂದು ಅರ್ಥ ಬರುವುದೇ ಕಷ್ಟದಿಂದ. ಕಷ್ಟ ಸುಖಗಳ ಹದವಾದ ಮಿಶ್ರಣದಿಂದಲೇ ಜೀವನಕ್ಕೊಂದು ಸೊಗಸು.
ರಕ್ತದಿಂದ ಬೆಸೆದಿರುವುದಲ್ಲ, ನಂಬಿಕೆಯಿಂದ ಬೆಸೆದಿರುವುದು. ನಂಬಿಕೆ ಇದ್ದರೆ ಬೇರೆಯವರು ನಮ್ಮವರಾಗುತ್ತಾರೆ. ನಂಬಿಕೆ ಇಲ್ಲದಿದ್ದರೆ ನಮ್ಮವರೇ ಬೇರೆಯವರಾಗುತ್ತಾರೆ..
ಜೀವನದಲ್ಲಿ ಆಸೆ ಪಡುವುದು ತಪ್ಪಲ್ಲ. ನಮ್ಮ ಯೋಗ್ಯತೆಗೆ ತಕ್ಕಂತೆ ಆಸೆ ಪಡಬೇಕು ಅಷ್ಟೇ.
ಒಬ್ಬರ ಆತ್ಮ ಗೌರವಕ್ಕೆ ಪದೇ ಪದೇ ನೋವುಂಟಾದರೆ ಎಷ್ಟೇ ಮಧುರವಾದ ಸಂಬಂಧವಾದರೂ ಮುರಿದು ಬೀಳುತ್ತದೆ.
ಬಿಳುಪಿಗೆ ಮಹತ್ವ ಬಂದಿದ್ದೇ ಕಪ್ಪಿನಿಂದ. ಸುಖಕ್ಕೊಂದು ಅರ್ಥ ಬರುವುದೇ ಕಷ್ಟದಿಂದ. ಕಷ್ಟ ಸುಖಗಳ ಹದವಾದ ಮಿಶ್ರಣದಿಂದಲೇ ಜೀವನಕ್ಕೊಂದು ಸೊಗಸು.
ಜ್ಞಾನದಿಂದ ಅಧಿಕಾರ ಸಿಗಬಹುದು, ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೇ ಬೇಕು.
ಇವತ್ತು ನಾವು ಏನು ಮಾಡುತ್ತೀವಿ ಎಂಬುದರ ಮೇಲೆ ನಮ್ಮ ನಾಳೆ ನಿರ್ಧರಿತವಾಗುತ್ತದೆ. ಅದಕ್ಕಾಗಿ ನಮ್ಮ ಇವತ್ತಿನ ದಿನವನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಮಾಡುವ ಕೆಲಸ ಯಾವುದಾದರೇನು ಅದು ನಮಗೆ ಒಂದು ತುತ್ತು ಅನ್ನ ಕೊಡುತ್ತಿದ್ದರೆ ಅದರ ಮೇಲೆ ಗೌರವವಿರಲಿ.
ಆದರ್ಶಗಳು ಯಾವತ್ತೂ ಮಾತಿನಿಂದ ಸೃಷ್ಟಿಯಾಗಬಾರದು, ಬದುಕಿನಿಂದ ಸೃಷ್ಟಿಯಾಗಬೇಕು. ಆಗ ಮಾತ್ರ ಅದಕ್ಕೊಂದು ಬೆಲೆ ಸಿಗುತ್ತೆ.
ಅಹಂಕಾರ ಎಂಬುದು ಒಂದು ಭಯಂಕರ ಮಾನಸಿಕ ಕಾಯಿಲೆ, ಈ ಕಾಯಿಲೆ ಬಂದವನು ಸುಖವಾಗಿರುವುದಿಲ್ಲ ಬೇರೆಯವರನ್ನು ಕೂಡ ಸುಖವಾಗಿರಲು ಬಿಡುವುದಿಲ್ಲ.
ಕಣ್ಣು ಹೋದ ಕಡೆಯಲ್ಲೆಲ್ಲ ಮನಸ್ಸು ಹೋಗಬಾರದು, ಮನಸ್ಸು ಹೋದ ಕಡೆಯಲ್ಲೆಲ್ಲ ಮನುಷ್ಯ ಹೋಗಬಾರದು.
ಜೀವನದಲ್ಲಿ ಹಣದ ಕೊರತೆ ಇದ್ದರೂ, ಗುಣದ ಕೊರತೆ ಇರಬಾರದು; ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿಪಡೆಯಬಹುದು, ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಎಷ್ಟು ಓದಿದ್ದೇನೆ ಯಾವ ಪದವಿ ಪಡೆದಿದ್ದೇನೆ ಎಂಬುದು ಮುಖ್ಯವಲ್ಲ, ನಿಜವಾದ ಶಿಕ್ಷಣ ಅಂದ್ರೆ ಬೇರೆಯವರೊಂದಿಗಿನ ನಮ್ಮ ಮಾತು, ಸಂಸ್ಕಾರ ಮತ್ತು ನಡವಳಿಕೆ, ಇವೆ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.
ಬಾಳನ್ನು ಹಸನಾಗಿಸಿಕೊಳ್ಳಬೇಕು; ಪ್ರಹಸನ ವಾಗಿಸಿಕೊಳ್ಳಬಾರದು.
ಜೀವನವೆಂದರೆ ಎಲ್ಲದಕ್ಕೂ ಎಲ್ಲರಿಗೂ ಹೆದರಿ ಬದುಕೋದಲ್ಲ. ಎಲ್ಲರೆದುರು ಎಲ್ಲವನ್ನೂ ಎದುರಿಸಿ ಎಲ್ಲರ ಮಧ್ಯೆ ಛಲದಿಂದ ಬದುಕಿ ಬಾಳೋದೇ ನಿಜವಾದ ಜೀವನ.
ಶಿಕ್ಷಣವನ್ನು ಎಲ್ಲಿಂದ ಬೇಕಾದರೂ ಪಡೆಯಬಹುದು ಆದರೆ ಸಂಸ್ಕಾರವು ಯಾವಾಗಲೂ ಮನೆಯಿಂದಲೇ ಸಿಗುವುದು.
ಬದುಕಿನಲ್ಲಿ ಎಲ್ಲವೂ ಮಿತವಾಗಿದ್ದರೆ, ಬದುಕು ಯಾವಾಗಲೂ ಹಿತವಾಗಿರುತ್ತೆ.
ಯಾವುದೆ ಒಬ್ಬ ವ್ಯಕ್ತಿ ಜನರ ಮನಸ್ಸಿಗೆ ತೀರ ಹತ್ತಿರವಾಗೋದು ತನ್ನ ವ್ಯಕ್ತಿತ್ವದಿಂದಲೆ ಹೊರತು ರೂಪದಿಂದಲ್ಲ.
ನಮ್ಮ ಜೀವನದ ಕೊನೆಯಲ್ಲಿ ಸಾಧನೆಗಳಿಗಿಂತ ಸಂಬಂಧಗಳು ಹೆಚ್ಚು ಮುಖ್ಯವೆಂದು ನಾವು ಕಂಡುಕೊಳ್ಳುತ್ತೇವೆ.
ನಾವು ಉತ್ತಮ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಕೆಟ್ಟವರಲ್ಲೂ ಒಳ್ಳೆಯ ಗುಣಗಳನ್ನು ಹುಡುಕಬಹುದು; ನಮ್ಮ ವಿಚಾರಧಾರೆಯೇ ತಪ್ಪಾಗಿದ್ದರೆ ಒಳ್ಳೆಯವರಲ್ಲೂ ಕೆಟ್ಟಗುಣವೇ ನಮಗೆ ಕಂಡುಬರುತ್ತದೆ.
ಬೆಳೆಯುವ ಮಕ್ಕಳನ್ನು ಕಷ್ಟಗಳೇ ನೋಡದಂತೆ ಬೆಳೆಸಬೇಕೆಂಬುವುದು ತಪ್ಪಲ್ಲ, ಆದರೆ ಜೀವನದ ಮೌಲ್ಯಗಳನ್ನು ಹೇಳಿಕೊಡದೇ ಬೆಳೆಸುವುದು ತಪ್ಪಾಗಿರುತ್ತದೆ.
ತುಂಬಾ ಇಷ್ಟ ಪಟ್ಟಾಗ ಸಿಗುವುದು ನೋವು, ತುಂಬಾ ನೊಂದಾಗ ಸಿಗುವುದು ತಿಳುವಳಿಕೆ, ತುಂಬಾ ತಿಳುವಳಿಕೆ ಬಂದಾಗ ಸಿಗುವುದು ಅನುಭವ; ಆ ಅನುಭವವೇ ಜೀವನ.
ತೋರಿಕೆಯ ಜೀವನ ನಡೆಸಬಾರದು. ಅದು ನಮ್ಮ ವ್ಯಕ್ತಿತ್ವವನ್ನು ಕಡಿಮೆ ಮಾಡುತ್ತದೆ... ತೋರಿಕೆ ಇಲ್ಲದೆ ಬದುಕಿ ತೋರಿಸಿದರೆ ಜಗತ್ತೇ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯದೇ ಆಚರಿಸಿಕೊಂಡು ಬರಬೇಕಾಗಿದೆ.
ಜೀವನದಲ್ಲಿ ಅಂದ ವಾಗಿರುವುದಕ್ಕಿಂತ. ಆನಂದ ವಾಗಿರುವುದು ಅತಿ ಮುಖ್ಯ.
ನಿರೀಕ್ಷೆಗಳ ತೂಕ ಕಡಿಮೆಯಾದಂತೆಲ್ಲಾ ನೆಮ್ಮದಿಯ ತೂಕ ಹೆಚ್ಚಾಗುತ್ತಾ ಹೋಗುತ್ತದೆ.
ನಮ್ಮ ಆಲೋಚನೆಗಳು ಉತ್ತಮವಾಗದ ಹೊರತು ನಮ್ಮ ಬದುಕು ಉತ್ತಮಗೊಳ್ಳಲು ಸಾಧ್ಯವಿಲ್ಲ.
ಒಳ್ಳೆಯ ಅಭಿಪ್ರಾಯಗಳು ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತವೆ ಎನ್ನುವುದಕ್ಕಿಂತ, ಭಿನ್ನಾಭಿಪ್ರಾಯಗಳನ್ನು ನಾವು ಎಷ್ಟು ಚೆನ್ನಾಗಿ ನಿವಾರಿಸಿಕೊಳ್ಳುತ್ತೇವೆ ಎಂಬುದರಲ್ಲಿ ಒಂದು ಒಳ್ಳೆಯ ಸಂಬಂಧಗಳು ಅವಲಂಬಿತವಾಗಿರುತ್ತದೆ.
ಮತ್ತೊಬ್ಬರ ಬದುಕಿನಲ್ಲಿ ಒಂದು ಒಳ್ಳೆಯ ನೆನಪಾಗಿ ಉಳಿಯುವುದು ಕೂಡ ಬದುಕಿನ ಶ್ರೇಷ್ಠ ಸಾಧನೆಯಲ್ಲಿ ಒಂದು.
ನಮ್ಮ ಕಾಲವನ್ನು ನಮ್ಮ ಕಾಲೇ ನಿರ್ಧರಿಸುತ್ತವೆ, ಒಳ್ಳೆಯ ದಾರಿಯಲ್ಲಿ ಕಾಲಿಟ್ಟರೆ ಒಳ್ಳೆಯದು, ಕೆಟ್ಟ ದಾರಿಯಲ್ಲಿ ಕಾಲಿಟ್ಟರೆ ಕೆಟ್ಟದ್ದು. ಆಯ್ಕೆ ನಮ್ಮದೇ ಆಗಿರುತ್ತದೆ.
ನಾವು ಒಬ್ಬರ ಮೇಲೆ ಬೇಜಾರು ಆಗಿದೀವಿ ಅಂದರೆ ಅದು ಅವರ ತಪ್ಪಲ್ಲ ನಮ್ಮದೇ ತಪ್ಪು, ಯಾಕೆಂದರೆ ಅಗತ್ಯಕ್ಕಿಂತ ಹೆಚ್ಚಾಗಿ ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆ.
ಯಾವತ್ತೂ ಈಗಿರುವ ಸ್ಥಿತಿ ಶಾಶ್ವತವಲ್ಲ. ಮುಂದಿನ ಕ್ಷಣ ಒಳ್ಳೆಯದಿರಲಿ ಎಂಬ ಆಶಯದೊಂದಿಗೆ ಇಂದಿನ ಕೆಲಸದ ಗುಣಮಟ್ಟಕ್ಕೆ ಆಧ್ಯತೆ ನೀಡೋಣ.
ಆಗಿ ಹೋಗಿರುವುದನ್ನು ಸರಿಪಡಿಸಲು ಪ್ರಯತ್ನಿಸಬಾರದು ಅದು ಅಸಾಧ್ಯ... ಮುಂದೆ ಮಾಡಬೇಕಾದುದನ್ನು ಸರಿಯಾದ ರೀತಿಯಲ್ಲಿ ಯೋಚಿಸಿ ಮಾಡಿದರೆ ಅದು ಸಾಧ್ಯ.
ಬಡತನ ಶಾಶ್ವತವಲ್ಲ, ಸಿರಿತನ ಶಾಶ್ವತವಲ್ಲ, ನಮ್ಮಲ್ಲಿರುವ ಮಾನವೀಯ ಗುಣಗಳೇ ಶಾಶ್ವತವಾದದ್ದು.
ಇನ್ನೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿದಾಗ ಮಾತ್ರವೇ ನಮಗೆ ನಮ್ಮತನ ಕಾಣುವುದು.
ಒಳ್ಳೆಯ ಮಾತುಗಾರನಾಗಬೇಕೆಂದರೆ ಮೊದಲು ಒಳ್ಳೆಯ ಕೇಳುಗನಾಗಬೇಕು, ಇನ್ನೊಬ್ಬರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳೋಣ.
ಪರಿಪೂರ್ಣ ಬದುಕಿಗಾಗಿ ಬೇಕಿರುವುದು ಪದವಿಗಳಲ್ಲ; ಪವಿತ್ರವಾದ ಮನಸ್ಸು, ಹೃದಯ ವೈಶಾಲ್ಯತೆ.
ಪ್ರೀತಿ ಹಾಗೂ ಮೋಹ, ಈ ಎರಡರಲ್ಲೂ ತುಂಬಾ ವ್ಯತ್ಯಾಸವಿದೆ; ಪ್ರೀತಿ ನಮ್ಮನ್ನು ಸ್ವತಂತ್ರಗೊಳಿಸಿದರೆ, ಮೋಹ ನಮ್ಮನ್ನು ಬಂಧನಕ್ಕೊಳಪಡಿಸುತ್ತದೆ.
ಸುಳ್ಳು ಹೇಳುವುದನ್ನು ಮತ್ತು ನಾಟಕ ಆಡುವುದನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿಗಳಿಗೆ....! ಕಳೆದುಕೊಂಡ 'ವಸ್ತು' ಹಾಗೂ 'ವ್ಯಕ್ತಿ' ಗಳ ಬೆಲೆ ತಿಳಿಯುವುದಿಲ್ಲ...! ಏಕೆಂದರೆ, ಸಂಬಂಧ ಮತ್ತು ವಸ್ತುಗಳ ಮೇಲೆ ಅವರು ತೋರಿಸುವ 'ಒಲವು' ಕೂಡ ನಾಟಕವೇ ಆಗಿರುತ್ತದೆ.
ದೇಶದಲ್ಲಿ ರಾಜ, ಸಮಾಜದಲ್ಲಿ ಗುರು, ಪರಿವಾರದಲ್ಲಿ ತಂದೆ, ಮನೆಯಲ್ಲಿ ಸ್ತ್ರೀ, ಇವರು ಎಂದಿಗೂ ಸಾಧಾರಣ ವ್ಯಕ್ತಿಗಳಲ್ಲ; ಏಕೆಂದರೆ ಅಭಿವೃದ್ಧಿ ಮತ್ತು ವಿನಾಶ ಇವೆರಡೂ ಇವರ ಕೈಯಲ್ಲೇ ಇರುತ್ತದೆ.
ನಾವು ತಪ್ಪನ್ನು ಮಾಡಬಾರದು ಎಂದು ನಿರ್ಧಾರ ಮಾಡಬೇಕು, ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳಬೇಕು; ನಮ್ಮ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಬೇಕು, ಅವಾಗ ಮಾತ್ರ ಜೀವನ ಸಂತೋಷವಾಗಿರುತ್ತೆ.
ಸಂಪತ್ತು ಬಂದರೆ ಮನೆ ಬದಲಿಸಿ..... ಮೊಬೈಲ್ ಬದಲಿಸಿ.... ಬಳಸುತ್ತಿರುವ ಗಾಡಿ ಬೇಕಾದರೆ ಬದಲಿಸಿ.... ಆದರೆ ವ್ಯಕ್ತಿತ್ವವನ್ನಲ್ಲ...
ಉದಾಹರಣೆಗಳನ್ನು ಕೊಡುವುದು ಸುಲಭ. ಒಳ್ಳೆಯ ನಡವಳಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವೇ ಇತರರಿಗೆ ಒಂದು ಉತ್ತಮ ಉದಾಹರಣೆಯಾಗಲು ಪ್ರಯತ್ನಿಸೋಣ.
ಮನಸ್ಸು ಸಿರಿವಂತವಾಗಿದ್ದರೆ ನಮ್ಮಲ್ಲಿ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೇ..... ಮನಸ್ಸೇ ಬಡವಾಗಿದ್ದರೆ ನಮ್ಮಲ್ಲಿ ಇದ್ದರೂ ನಾವು ಬಡವರೇ...... ಸಂತೃಪ್ತಿಗಿಂತ ಮಿಗಿಲಾದ ಸಂಪತ್ತಿಲ್ಲ.
ಕಷ್ಟ ಪಡುವುದಕ್ಕೆ ನಾಚಿಕೆ ಪಟ್ಟರೆ, ವಯಸ್ಸಾದ ನಂತರ ಎಲ್ಲರ ಮುಂದೆ ಜೀವನ ಮಾಡುವುದಕ್ಕೆ ನಾಚಿಕೆ ಪಡಬೇಕಾಗುತ್ತದೆ.
ಸಮಯಕ್ಕೆ ಮೌಲ್ಯವಿದೆ, ಏಕೆಂದರೆ ಅದು ಯಾರಿಗೂ ಕಾಯುವುದಿಲ್ಲ.ಕಾಲಕ್ಕೆ ಸರಿಯಾಗಿ ಕೆಲಸ ಮಾಡದೇ ಹೋದರೆ ಸೋಲುವುದು ನಾವೇ; ಕಾಲವಲ್ಲ .
ಸಂಪತ್ತು ಎಷ್ಟೇ ಇದ್ದರೂ, ಸರಳತೆ ಮಾತ್ರ ಮನುಷ್ಯನಿಗೆ ಒಳ್ಳೆಯ ಗೌರವ ತಂದು ಕೊಡುತ್ತೆ; ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟ ಬಹುದು, ಆದರೆ ಸರಳತೆಗೆ ಬೆಲೆ ಕಟ್ಟಲಾಗದು...
ಯಶಸ್ಸು ಮತ್ತು ಸಂತೋಷ ನಮ್ಮ ಕೆಲಸಗಳ ಫಲ ಎಂಬುದು ತಿಳಿಯತೊಡಗಿದರೆ, ನಮ್ಮ ಪಯಣ ಸರಿಯಾದ ದಿಕ್ಕಿನಲ್ಲಿದೆ ಅಂತಲೇ ಅರ್ಥ!
ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಯಾವುದನ್ನೂ ಹೇಗೆ ಆನಂದಿಸಬೇಕೆಂದು ತಿಳಿದಿಲ್ಲ; ಎಲ್ಲವನ್ನೂ ಆನಂದಿಸುವವನಿಗೆ ಯಾವುದರಲ್ಲೂ ತಪ್ಪೇನೂ ತಿಳಿಯದು.
ನಮ್ಮ ಜೀವನವು ಸ್ವಲ್ಪಮಟ್ಟಿಗೆ ಮಾತ್ರ ನಮ್ಮಿಂದ ರೂಪುಗೊಂಡಿದೆ ಮತ್ತು ಕೆಲಮಟ್ಟಿಗೆ ನಾವು ಆಯ್ಕೆ ಮಾಡಿಕೊಂಡ ಸ್ನೇಹಿತರಿಂದಲೂ ರೂಪಿಸಲ್ಪಟ್ಟಿದೆ.
ಬೇರೆಯವರನ್ನು ಮಾದರಿಯಾಗಿಟ್ಟುಕೊಂಡು ಬದುಕಿದರೆ ಸಾಲದು, ನಾವೂ ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು.
ಆದರ್ಶಗಳು ಯಾವತ್ತೂ ಮಾತಿನಿಂದ ಸೃಷ್ಟಿಯಾಗಬಾರದು, ಬದುಕಿನಿಂದ ಸೃಷ್ಟಿ ಯಾಗಬೇಕು; ಆಗಮಾತ್ರ ಅದಕ್ಕೊಂದು ಬೆಲೆ ಸಿಗುತ್ತೆ.
ಯಾವುದೇ ಒಬ್ಬ ವ್ಯಕ್ತಿ ಜನರ ಮನಸ್ಸಿಗೆ ತೀರ ಹತ್ತಿರವಾಗೋದು ತನ್ನ ವ್ಯಕ್ತಿತ್ವದಿಂದಲೆ ಹೊರತು ರೂಪದಿಂದಲ್ಲ.
ಮಾತಿನ ವರ್ತನೆ ಹೇಳುತ್ತದೆ, ಮನುಷ್ಯ ಹೇಗೆ ಅಂತ; ವಾದಿಸುವ ವರ್ತನೆ ಹೇಳುತ್ತದೆ, ಅವನ ಜ್ಞಾನ ಎಷ್ಟು ಅಂತ; ಅಹಂಕಾರ ಹೇಳುತ್ತದೆ, ಅವನ ಬಳಿ ಇರುವ ಧನ ಎಷ್ಟು ಅಂತ; ಸಂಸ್ಕಾರ ಹೇಳುತ್ತದೆ, ಅವನ ಮನೆತನ ಹೇಗಿದೆ ಅಂತ.
ಮಾತು ಹೊರ ಬೀಳುವ ಮುನ್ನ ಮಿದುಳು ಕೆಲಸ ಮಾಡಿದರೆ ಅನೇಕ ಅವಾಂತರಗಳು ತಪ್ಪುತ್ತವೆ. ವಿವೇಚನೆ ಮಾತಿನ ಜೊತೆಗೇ ಇರಲಿ!
ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು.
ನಮ್ಮ ಬಗ್ಗೆ ನಾವೇ ಹೇಳಿಕೊಳ್ಳೋದು ಸಾಧನೆ ಅಲ್ಲ; ನಾವಿಲ್ಲದಿದ್ದರೂ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡೋ ಹಾಗೆ ಮಾಡಿಸೋದು ಸಾಧನೆ.
ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ, ಬಾರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ.
ಬಣ್ಣದ ಮಾತುಗಳು ಮುತ್ತುಗಳಾಗುತ್ತವೆ, ಸತ್ಯದ ಮಾತುಗಳು ಮುಳ್ಳುಗಳಾಗುತ್ತವೆ.
ಮಕ್ಕಳಿಗೆ ವಸ್ತುಗಳನ್ನು ಕೊಡಿಸದಿದ್ದರೆ ಸ್ವಲ್ಪ ಹೊತ್ತು ಅಳುತ್ತಾರೆ, ಆದರೆ ಒಳ್ಳೆಯ ಸಂಸ್ಕಾರ ಕಲಿಸದಿದ್ದರೆ ಜೀವನ ಪರ್ಯಂತ ಅಳುತ್ತಾರೆ.
ಲೋಕದಲ್ಲಿ ಯಾವ ಒಂದು ವಸ್ತುವಿನ ಬೆಲೆಯೇ ಆಗಲಿ ಅವರ ಜನೋಪಯೋಗಿತೆಯನ್ನು ಅವಲಂಬಿಸಿಕೊಂಡಿರುತ್ತದೆ.
ಇತರರಿಗಿಂತ ಚೆನ್ನಾಗಿರುವುದು ನಮ್ಮ ಗುರಿಯಾಗಿರಬಾರದು, ನಾವು ಈಗ ಇರುವುದಕ್ಕಿಂತಲೂ ಚೆನ್ನಾಗಿರಬೇಕೆಂಬುದು ನಮ್ಮ ಗುರಿಯಾಗಿರಬೇಕು.
ಈಗೀಗ ಕೆಲವು ಸಂಬಂಧಗಳು ಮಳೆ ಬಂದಾಗ ನೆನಪಾಗುವ ಕೊಡೆಯ ಹಾಗೆ...! ಅಗತ್ಯತೆ ಮುಗಿದಾದ ಮೇಲೆ ಕೊಡೆಯಂತೆಯೇ ಆತ್ಮೀಯ ಸಂಬಂಧಗಳೂ ಮೂಲೆಗೆ ಸೇರುತ್ತವೆ..!!
ನಾವು ವ್ಯರ್ಥವಾಗಿ ಕಳೆಯುವ ಪ್ರತಿಯೊಂದು ನಿಮಿಷವೂ ಭವಿಷ್ಯದಲ್ಲಿ ನಮ್ಮನ್ನು ನಮ್ಮ ಗುರಿಯಿಂದ ದೂರ ಮಾಡುತ್ತದೆ.
ಆತ್ಮ ವಿಶ್ವಾಸ ಒಂದು ಮಹಾ ಆಯುಧ. ಅದು ಎಲ್ಲ ಸಂದರ್ಭದಲ್ಲಿ ಜಯ ತಂದು ಕೊಡದಿರಬಹುದು. ಆದರೆ ಯಾವುದೇ ಸವಾಲನ್ನು ಎದುರಿಸಲು ಧ್ಯೆರ್ಯ ತುಂಬುತ್ತದೆ.
ಸಾಧ್ಯ ಅಥವಾ ಅಸಾಧ್ಯ ಈ ಎರಡರ ನಡುವಿನ ವ್ಯತ್ಯಾಸವು ಒಬ್ಬ ವ್ಯಕ್ತಿಯ ದೃಢ ಸಂಕಲ್ಪವನ್ನು ಆಧರಿಸಿರುತ್ತದೆ.
ಆರ್ಥಿಕ ಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಕೂಡ, ಜೀವನದ ನಿಜವಾದ ಸಂತೋಷ ಅನುಭವಿಸಲು ಮಾನಸಿಕ ಸ್ಥಿತಿ ಚೆನ್ನಾಗಿರಬೇಕು.
ನಾವು ಮನುಷ್ಯರನ್ನು ಪ್ರೀತಿಸಬೇಕು, ವಸ್ತುಗಳನ್ನು ಬಳಸಬೇಕು; ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳಬಾರದು.
ಯಾವುದೇ ಪ್ರಯತ್ನದಲ್ಲಿ ವಿಫಲರಾದಾಗ ಮತ್ತೆ ಆರಂಭಿಸಲು ಅಂಜಿಕೆ ಬೇಡ, ಏಕೆಂದರೆ ಈ ಬಾರಿ ಅನುಭವ ನಿಮ್ಮ ಜತೆಗಿರುತ್ತದೆ.
ಹೋರಾಟವಿಲ್ಲದಿದ್ದರೆ, ಯಾವುದೇ ಪ್ರಗತಿಯಿಲ್ಲ; ಜೀವನವೇ ಒಂದು ಹೋರಾಟ.
ಮನೆ ಎಷ್ಟು ದೊಡ್ಡದು ಇದೆ ಅನ್ನೋದು ಮುಖ್ಯ ಅಲ್ಲ; ಆ ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೀವಿ ಅನ್ನೋದು ಮುಖ್ಯ...
ನಕಾರಾತ್ಮಕ ಯೋಚನೆಗಳು ಪಂಕ್ಚರ್ ಆದ ಟಯರ್ ನಂತೆ; ಅದನ್ನು ಬದಲಾಯಿಸದಿದ್ದರೆ ತುಂಬ ದೂರ ಹೋಗುವುದು ಸಾಧ್ಯವೇ ಇಲ್ಲ.
ಸಂಬಂಧ ಎಂಬುದು ಅರಿತು ತಿದ್ದುವಂತೆ ಇರಬೇಕೆ ಹೊರೆತು...... ಹರಿದು ತಿನ್ನುವಂತೆ ಇರಬಾರದು...!
ನಾವು ಮಾಡುತ್ತಿರುವ ಕೆಲಸ ನಮ್ಮ ಅಂತರಂಗದ ಆನಂದಕ್ಕೆ ಕಾರಣವಾದರೆ ಸಾಕು, ಬೇರೆಯವರನ್ನು ತೃಪ್ತಿಪಡಿಸುತ್ತಾ ಕೂರುವ ಅಗತ್ಯವಿಲ್ಲ.
ಯಾವಾಗಲೂ ಯೋಚಿಸಿ ಮಾತನಾಡುವುದನ್ನು ಕಲಿಯಬೇಕು; ಏಕೆಂದರೆ ನಾವಾಡಿದ ಮಾತನ್ನು ನಾವು ಮರೆತರು ಕೇಳಿಸಿಕೊಂಡವರು ಯಾವತ್ತೂ ಮರೆಯುವುದಿಲ್ಲ.
ಸಂಬಂಧಗಳನ್ನು ಉಳಿಸಿಕೊಳ್ಳಲು ತ್ಯಾಗದ ಅವಶ್ಯಕತೆ ಇಲ್ಲ; ಬದಲಿಗೆ ತಿಳುವಳಿಕೆಯ ಅವಶ್ಯಕತೆ ಇದೆ.
ಮನುಷ್ಯನ 'ಒಳ್ಳೆಯತನವು ಇರುವುದು' ಈ ಸಮಾಜದಲ್ಲಿ ತೋರಿಕೆಗಾಗಿ ಬಳಸುವುದಕ್ಕೆ ಅಲ್ಲವೇ ಅಲ್ಲ...! ಒಳ್ಳೆಯತನ ಇರುವುದು ಅವನ ಜೀವನದ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಬಳಸಿಕೊಳ್ಳುವುದಕ್ಕಾಗಿ...!!
ಬದುಕಿನ ಪುಸ್ತಕ ಎಷ್ಟೇ ಹಳೆಯದಾದರೂ ನೆನಪಿನ ಪುಟಗಳು ಇನ್ನೂ ಹೊಸದಾಗಿಯೇ ಇರುತ್ತವೆ.
ನಂಬಿಕೆ ಇಲ್ಲದ ಕಡೆ ನಾವು ಏನೇ ಹೇಳಿದರೂ ಸುಳ್ಳಿನಂತೆ ಕಾಣುತ್ತದೆ.
Yes or No ' ಇದು ಎರಡು ಸಣ್ಣ ಸಣ್ಣ ಪದ, ಆದರೂ ಇದರಲ್ಲಿ ನಾವು ಆಯ್ಕೆ ಮಾಡುವುದರಲ್ಲಿ ಸ್ವಲ್ಪ ಎಡವಿದರೂ ಜೀವನದ ದಿಕ್ಕೆ ಬದಲಾಗಿಬಿಡುತ್ತದೆ...!
ಕೆಟ್ಟ ವಿಚಾರಗಳು ಆಳವಾದಷ್ಟು ನೆಮ್ಮದಿಯ ಸರಪಳಿ ಕಿತ್ತು ಬೀಳುತ್ತದೆ...
ಹಣಕ್ಕೆ ಮರ್ಯಾದೆ ಕೊಡಬೇಕು ನಿಜ, ಆದರೆ, ಹಣಕ್ಕಾಗಿ ಮರ್ಯಾದೆ ಬಿಡಬಾರದು.
ಭಾವ ನೋಡಿ ಸ್ಪಂದಿಸಬೇಡಿ ಭಾವನೆ ಅರಿತು ಸ್ಪಂದಿಸಿ, ಭಾವ ಮೋಸಮಾಡಿದರು ಭಾವನೆ ಮೋಸಮಾಡದು; ಬಾವಕ್ಕಿಂತ ಭಾವನೆಗೆ ಬೆಲೆಕೊಡುವವನೆ ನಿಜವಾದ ಮನುಜ.
ನಾವು ಆರೋಗ್ಯವಂತರಾಗಿ ಚೆನ್ನಾಗಿ ಇರಬೇಕೆಂದರೆ, ಅದರ ಮೊದಲ ಹೆಜ್ಜೆ ನಮ್ಮ ಜೀವವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದಕ್ಕೆ ಗಮನ ನೀಡುವುದು.
ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಆರ್ಥಿಕ ಲಾಭ ಸಿಗದೇ ಇರಬಹುದು...! ಆದರೆ ಅಂತಹಾ ಗುಣಕ್ಕೆ ಸಾವಿರಾರು ಮನಸ್ಸುಗಳನ್ನು ಗೆಲ್ಲುವ ಶಕ್ತಿಯಿರುತ್ತದೆ....!! ಲಾಭ-ನಷ್ಟವನ್ನು ಯಾವತ್ತೂ ಹಣದಲ್ಲೇ ಆಳೆಯಬಾರದು...!!!
ಸಂಸ್ಕಾರವೆಂಬುದು..... ನಾಲ್ಕಕ್ಷರ ಕಲಿತ ಮಾತ್ರಕ್ಕೆ ಬರುವಂಥದ್ದಲ್ಲ; ಒಳ್ಳೆಯ ವ್ಯಕ್ತಿತ್ವ ಮತ್ತು ಅನುಭವ ಹೊಂದಿರುವ ವ್ಯಕ್ತಿಗಳ ಒಡನಾಟದಿಂದ ಮಾತ್ರ ಸಾಧ್ಯ
ವ್ಯಕ್ತಿಯ ವ್ಯಕ್ತಿತ್ವ ಗಡಿಯಾರದಲ್ಲಿರುವ ನಂಬರ್ ಆಗಬೇಕೆ ವಿನಃ, ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳುಗಬಾರದು...
ಒಳ್ಳೆಯ ಸ್ವಭಾವ ಹೊಂದಿರುವ ವ್ಯಕ್ತಿ ಗಣಿತದಲ್ಲಿರುವ ಶೂನ್ಯದಂತೆ..... ಅವರು ಯಾರ ಬಳಿ ಇರುತ್ತಾರೋ ಅವರ ಬೆಲೆ ಹೆಚ್ಚುತ್ತಾ ಹೋಗುತ್ತದೆ.....
ಜೀವನದಲ್ಲಿ ಯಾವುದಕ್ಕೂ ಪಶ್ಚಾತ್ತಾಪ ಪಡಬಾರದು, ಒಳ್ಳೆಯದಾದರೆ ಅದ್ಭುತ ಎಂದು ಭಾವಿಸಬೇಕು, ಕೆಟ್ಟದಾದರೆ ಅದೊಂದು ಅನುಭವ ಎಂದು ಪರಿಗಣಿಸಬೇಕು.
ನೀರಿನಲ್ಲಿ ನಿಂತರೂ ನಮಗೆ ಕುಡಿಯಲು ನಿರ್ಮಲವಾದ ನೀರು ಬೇಕು.......! ಜನಸಾಗರದ ನಡುವೆ ಇದ್ದರೂ ನಮಗೆ ಜ್ಞಾನವನ್ನು ಸಂಪಾದಿಸಲು ಸಜ್ಜನ ಸಂಗವೇ ಬೇಕು...!!
ಬದುಕು ಇರುವುದು ' ಸವಿಯಲು', 'ಸವೆಯಲು' ಅಲ್ಲ.... ಬದುಕು ಇರುವುದು 'ಸಾಧಿಸಲು', 'ರೋಧಿಸಲು' ಅಲ್ಲ.... ಬದುಕು ಇರುವುದು 'ಸಂತಸಪಡಲು', 'ಸಂಕಟಪಡಲು' ಅಲ್ಲ...
ಬದುಕು ಇರುವುದು 'ಬಾಳುವುದಕ್ಕೆ', 'ಬಳಲುವುದಕ್ಕಲ್ಲ'.... ಆದ್ದರಿಂದ ನಮ್ಮ ಬದುಕು,, ಒಂದು 'ಸಂಭ್ರಮ' ವಾಗಿರಬೇಕೇ ಹೊರತು 'ಸಂಗ್ರಾಮ'ವಾಗಿರಬಾರದು....
ಬದುಕಿನಲ್ಲಿ ಶೇಕಡಾ 95 ರಷ್ಟು ಸಮಸ್ಯೆಗಳು ಸೃಷ್ಟಿಯಾಗುವುದು ನಮ್ಮ ಮಾತಿನ ಧ್ವನಿಯಿಂದ, ಏನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಹೇಳುತ್ತೇವೆ ಎನ್ನುವುದೇ ಮುಖ್ಯ; ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ.
ಸಂಪತ್ತು ಪ್ರೀತಿಸಿದವನಿಗೆ ಸಂಬಂಧಗಳ ಅವಶ್ಯಕತೆ ಇಲ್ಲ, ಸಂಬಂಧಗಳ ಪ್ರೀತಿಸಿದವನಿಗೆ ಸಂಪತ್ತಿನ ಅವಶ್ಯಕತೆ ಇಲ್ಲ; ಸಂಪತ್ತು ಸಂಸ್ಕೃತಿಯನ್ನು ಕೆಡಿಸಿದರೆ, ಸಂಬಂಧ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತದೆ.
ನಮ್ಮ ಆಸೆಗಳಲ್ಲಿ ಬಹುಪಾಲು ನಮ್ಮ ಸುತ್ತಲಿನವರನ್ನು ನೋಡಿ ಬಯಸಿದಂತವುಗಳೇ. ವಿವೇಚನೆಯಿಲ್ಲದೇ ಎಲ್ಲವನ್ನೂ ಬಯಸಿದರೆ ಇದ್ದ ನೆಮ್ಮದಿಯೂ ಕೆಡುತ್ತದೆ.
ಬದುಕಿನಲ್ಲಿ ಸಂತೋಷವಾಗಿರಬೇಕು ಎಂದರೆ ನಮ್ಮ ಕೈಮೀರಿದ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು.
ನಾವು ಉತ್ತಮ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಕೆಟ್ಟವರಲ್ಲೂ ಒಳ್ಳೆಯ ಗುಣಗಳನ್ನು ಹುಡುಕಬಹುದು; ನಮ್ಮ ವಿಚಾರಧಾರೆಯೇ ತಪ್ಪಾಗಿದ್ದರೆ ಒಳ್ಳೆಯವರಲ್ಲೂ ಕೆಟ್ಟಗುಣವೇ ನಮಗೆ ಕಂಡುಬರುತ್ತದೆ
ಸಂಬಂಧಗಳನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೋ ಬದುಕು ಅಷ್ಟು ಸಂತೋಷವಾಗಿರುತ್ತದೆ.
ತಾತ್ಕಾಲಿಕ ಅನಿಸಿಕೆಗಳನ್ನು ಅನುಸರಿಸಿ ಶಾಶ್ವತ ನಿರ್ಣಯ ಕೈಗೊಳ್ಳಬಾರದು; ವಸ್ತುಸ್ಥಿತಿಯ ಅಭ್ಯಾಸ, ಪರಿಣಾಮಗಳ ಅರಿವಿನೊಂದಿಗೆ ತೀರ್ಮಾನಕ್ಕೆ ಬರಬೇಕು.
ಮುಖದ ಕಪ್ಪು ಕಲೆಗಳನ್ನು ಅಳಿಸಲು ನೂರು ಔಷಧ ಬಳಸುವ ನಾವು ಮನಸ್ಸಿನ ತಪ್ಪು ಕಲ್ಪನೆಗಳನ್ನು ಅಳಿಸಲು ಒಮ್ಮೆಯಾದರೂ ಯೋಚಿಸಬೇಕಲ್ಲವೇ...?
ಮನಸ್ಸು ಭಾವನೆಗಳ ಗ್ರಂಥಾಲಯದಂತೆ.... ಆದರೆ ಕೆಲವರು ಮನಸ್ಸಿನ ಪುಟಗಳನ್ನು ಓದುವುದಕ್ಕಿಂತ ಹರಿಯುವುದೇ ಜಾಸ್ತಿ....!
ನಾವು ಸಂಪಾದನೆ ಮಾಡುವುದು ಚೆನ್ನಾಗಿ ಬದುಕಲು, ಒತ್ತಡದಿಂದ ನಮ್ಮನ್ನು ಕೊಂದುಕೊಳ್ಳಲು ಅಲ್ಲ.
ಬದುಕಿಗೆ ತನ್ನದೇ ಅರ್ಥವಿರುವುದಿಲ್ಲ, ನಾವು ಅದನ್ನು ಅರ್ಥಪೂರ್ಣಗೊಳಿಸಬೇಕು; ಕಲಾವಿದರ ಕೈಗೆ ಕೊಟ್ಟ ಜೇಡಿಮಣ್ಣು ದಿವ್ಯಮೂರ್ತಿಯಾಗುವಂತೆ.
ನಿತ್ಯ ಜೀವನದ ಚಿಕ್ಕ ಸಂಗತಿಗಳನ್ನು ಪ್ರಾಮಾಣಿಕವಾಗಿ ಗಮನಿಸಿ, ದೋಷಗಳಿರುವ ಕಡೆ ತಿದ್ದಿಕೊಳ್ಳುತ್ತ ಸಾಗುವುದೇ ಸಂತೋಷದ ಗುಟ್ಟು.
ನಾವು ಮಾತನಾಡಿದಾಗ, ನಮಗೆ ಈಗಾಗಲೇ ಗೊತ್ತಿರುವುದನ್ನಷ್ಟೇ ಮತ್ತೆ ಹೇಳುತ್ತಿರುತ್ತೀವಿ; ಆದರೆ, ನಾವು ಕೇಳಿಸಿಕೊಂಡಾಗ, ಹೊಸತನ್ನು ಕಲಿಯುತ್ತೀವಿ.
ಪದಗಳು ಸ್ಫೂರ್ತಿ ನೀಡಬಹುದು, ಆಲೋಚನೆಗಳು ಪ್ರಚೋದಿಸಬಹುದು; ಆದರೆ, ನಾವು ಮಾಡುವ ಕೆಲಸಗಳು ಮಾತ್ರ ನಮ್ಮ ಕನಸುಗಳ ಹತ್ತಿರ ಕರೆದುಕೊಂಡು ಹೋಗುತ್ತವೆ.
ಪರಸ್ಪರ ಪ್ರೀತಿಯ ಕೊರತೆಯೇ ಇತ್ತೀಚಿನ ಅನೇಕ ಅವಾಂತರಗಳ ಮೂಲ, ಸಕಾರಣ ಪ್ರೀತಿ ಅನೇಕ ಸಮಸ್ಯೆಗಳಿಗೆ ಮದ್ದಾಗಬಲ್ಲುದು.
ಜೀವನದಲ್ಲಿ ಒಂದನ್ನು ಪಡೆಯಬೇಕೆಂದರೆ ಮತ್ತೊಂದನ್ನು ಬಿಡಲೇಬೇಕು; ಆದರೆ, ಯಾವುದಕ್ಕಾಗಿ ಏನನ್ನು ಬಿಡುತ್ತೇವೆ ಎಂಬುದು ನಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.
ಕೋಪ ಮನಸ್ಸಿನಲ್ಲಿರಬಾರದು, ಮಾತಿನಲ್ಲಿ ಮಾತ್ರ ಇರಬೇಕು; ಪ್ರೀತಿ ಬರೀ ಮಾತಿನಲ್ಲಿ ಮಾತ್ರವಲ್ಲ ಮನಸ್ಸಿನಲ್ಲೂ ಇರಬೇಕು.
ಸಮಸ್ಯೆಗಳು ಬದುಕಿಗೆ ಅಡ್ಡಿಪಡಿಸುವ ತಡೆಗೋಡೆಗಳಲ್ಲ, ಸಾಗಬೇಕಾದ ಪಥದ ಮಾರ್ಗಸೂಚಿಗಳು.
ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಭ್ರಮಿಸದೆ ವ್ಯಕ್ತಿತ್ವದ ಉನ್ನತೀಕರಣ ಮತ್ತು ವೈಯಕ್ತಿಕ ಸಾಧನೆಗೆ ಶ್ರಮಿಸಿದರೆ, ಲೋಕೋದ್ಧಾರ ತಾನಾಗಿಯೇ ಆಗುತ್ತದೆ.
ಜೀವನವು ಒಂದು ವರವೂ ಅಲ್ಲ, ಶಾಪವೂ ಅಲ್ಲ ಅದೊಂದು ವಿದ್ಯಮಾನ ಅಷ್ಟೇ. ನಾವು ಅದನ್ನು ಚೆನ್ನಾಗಿ ನಿಭಾಯಿಸಿದರೆ, ಅದು ಸುಂದರವೂ ಅದ್ಬುತವೂ ಆಗುತ್ತದೆ. ಕೆಟ್ಟದಾಗಿ ನಿಭಾಯಿಸಿದರೆ ಅದು ವಿರೂಪಗೊಂಡು ಒಂದು ಯಾತನೆಯಾಗುತ್ತದೆ.
ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ, ಸದಾಚಾರ ಸಂಪನ್ನತೆ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಜ್ಞಾನ ಇವುಗಳನ್ನು ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿ ಪ್ರಾಪ್ತವಾಗುವುದರಲ್ಲಿ ಯಾವ ಸಂಶಯವಿಲ್ಲ.
ಯಾವುದೇ ಕೆಲಸ ಮಾಡುವ ಮುನ್ನ ಅವಶ್ಯಕತೆ ಮತ್ತು ಸಾಧ್ಯತೆಗಳನ್ನು ಅಭ್ಯಸಿಸಿ ಮುನ್ನಡಿಯಿಟ್ಟರೆ ಅಸಾಧ್ಯವೆನಿಸಿದ್ದೂ ಸುಲಭದಲ್ಲಿ ಮುಗಿದಿರುತ್ತದೆ .
ಈ ಸುಂದರವಾದ ದೇಹವು ನಿರ್ದಿಷ್ಟ ವಯಸ್ಸಿನವರೆಗೆ ಇರುತ್ತದೆ, ಆದರೆ ಸುಂದರ ಮತ್ತು ಕರುಣಾಳು ಮನಸ್ಸು ಸಾಯುವವರೆಗೂ ಇರುತ್ತದೆ; ದೇಹ ಸೌಂದರ್ಯವನ್ನು ಗೌರವಿಸಬೇಡಿ, ಶುದ್ಧ ಮನಸ್ಸನ್ನು ಗೌರವಿಸಿ ಮತ್ತು ಪ್ರೀತಿಸಿ.
ಕೆಲವೊಮ್ಮೆ ಒಂದೇ ಹಾಡನ್ನು ನೂರು ಬಾರಿ ಕೇಳುತ್ತೇವೆ, ಏಕೆಂದರೆ ಆ ಹಾಡಿನಲ್ಲಿ ಬರುವ ಕೆಲವು ಸಾಲುಗಳು ನಮ್ಮ ಮನಸ್ಸಿನಲ್ಲಿ ಇರುವ ಹಲವಾರು ಸುಖ ದುಃಖಗಳಿಗೆ ಹೋಲುವಂತಿರುತ್ತದೆ.
ಅನುಭವಗಳೇ ಜೀವನದ ಅತ್ಯಮೂಲ್ಯ ಪಾಠಗಳು; ಶಾಲೆಯಲ್ಲಿ ಕಲಿಯುವ ಪಾಠಗಳು ಶಾಲೆ ಮುಗಿಯುವವರೆಗೂ, ಜೀವನದಲ್ಲಿ ಬಿದ್ದಾಗ ಕಲಿಸುವ ಪಾಠಗಳು ಜೀವನ ಮುಗಿಯುವವರೆಗೂ.
ಹಣದ ಮೇಲೆ ಆಸೆ ಹೆಚ್ಚಿದಷ್ಟು ಅರೋಗ್ಯ, ಸಂಬಂಧಗಳು, ಪ್ರೇಮ, ಪ್ರೀತಿ, ಮಮತೆ ಕರುಣೆ ಎಲ್ಲವು ದೂರವಾಗುತ್ತವೆ.
ತಮ್ಮಲ್ಲಿರುವ ಸೂಕ್ತವಾದ ಕುಂದುಕೊರತೆಗಳನ್ನು ಅರಿತು, ಅದನ್ನು ಅಳಿಸಿ ಹಾಕುವುದೇ ನಿಜವಾದ ಸ್ವ ಚಿಂತನೆಯಾಗಿದೆ.
ನಿಜವಾದ ಸಂಬಂಧ ಹೃದಯದಿಂದ ಆಗ ಬೇಕೇ ಹೊರತು ಅವಶ್ಯಕತೆಗಳಿಂದಲ್ಲ...
ನಮ್ಮದು ನಾವು ನಂಬಿ ನಿಂತಾಗ ನಂಬಿಕೆಯು ನಮ್ಮನ್ನು ಕೈ ಹಿಡಿದು ನಡೆಸುತ್ತದೆ; ಪರರನ್ನು ನಂಬಿ ನಿಂತಾಗ ನಂಬಿಕೆಯೇ ನಮ್ಮನ್ನು ನೋಯಿಸುತ್ತದೆ.
ಯಾವಾಗ ನಮ್ಮ ಅತಿಯಾದ ನಿರೀಕ್ಷೆಗಳು ಅಂತ್ಯವಾಗುತ್ತದೆಯೊ, ಅಲ್ಲಿಂದ ನಮ್ಮ ನೆಮ್ಮದಿ ಆರಂಭವಾಗುತ್ತದೆ.
ದಾರಿಯಲ್ಲಿ ಮುನ್ನಡೆಯಲು, ನಾವು ಗಮನ ಹರಿಸಬೇಕಿರುವುದು ನಾವು ಎಲ್ಲಗೆ ಹೋಗುತ್ತಿದ್ದೀವೀ ಎಂಬುದರ ಮೇಲಷ್ಟೆ. ನಾವು ಎಲ್ಲಿಂದ ಬಂದಿವೀ ಎಂಬುದರ ಮೇಲೆಲ್ಲ.
ಮನೆಯಾಗಲಿ-ಮನಸ್ಸಾಗಲಿ ಒಡೆಯಲು ತಪ್ಪಿಗಿಂತ ಹೆಚ್ಚಾಗಿ ಮಧ್ಯದವರ ಕೈವಾಡವೆ ಹೆಚ್ಚು.
ಆಸೆ ಗುರಿ ಮುಟ್ಟಿಸುವಂತಿರಬೇಕು, ಗುರಿ ಜೀವನವನ್ನು ಕಲಿಸುವಂತಿರಬೇಕು, ಜೀವನ ಸಂಬಂಧಗಳನ್ನ ಸತ್ಕರಿಸುವಂತಿರಬೇಕು, ಸಂಬಂಧ ಸದಾ ನೆನಪು ಮಾಡಿಕೊಳ್ಳುವಂತಿರಬೇಕು.
ನಮ್ಮ ಸಂತೋಷಕ್ಕೆ ಸುತ್ತ ನಡೆಯುವ ವಿದ್ಯಮಾನಗಳಿಗಿಂತ ಅಂತರಂಗದಲ್ಲಿ ನಡೆಯುವ ಬದಲಾವಣೆಯೇ ಕಾರಣವಾಗಬೇಕು. ಅ ಖುಷಿಗೆ ಆಯುಷ್ಯ ಹೆಚ್ಚು.
ಕೆಳಗೆ ಬಿದ್ದರೆ ಒಡೆದು ಹೋಗುವ ಪೋನ್ ಗೆ ಬಹಳ ಬೆಲೆ ಕೊಡುತ್ತವೆ... ಅದೇ ತರಹ ಜೀವನ ಪರ್ಯಂತ ನಮ್ಮ ಜೊತೆ ಇರುವ ಸಂಬಂಧಗಳಿಗೆ ಇನ್ನಷ್ಟು ಬೆಲೆ ಕೊಡಬೇಕು ಚಿಕ್ಕ ಪುಟ್ಟ ಕಾರಣಗಳಿಂದ ಸಂಬಂಧಗಳನ್ನು ದೂರ ಮಾಡಿಕೋಳ್ಳಬಾರದು.
ಕಳೆದುಕೊಂಡಿದ್ದು ವಸ್ತುವಾದರೆ ಹುಡುಕಬಹುದು, ಇಲ್ಲವೇ ಮತ್ತೊಂದು ತೆಗೆದು ಕೊಳ್ಳಬಹುದು; ಕಳೆದುಕೊಂಡಿದ್ದು ನಂಬಿಕೆಯಾದರೆ ಹುಡುಕಿದರೂ ಸಿಗದು, ಕೊಂಡುಕೊಳ್ಳಲು ಸಾಧ್ಯವಾಗದು..
ಅನ್ಯರಿಗೆ ಗೌರವ ಕೊಡುವ ಗುಣ ನಮ್ಮಲ್ಲಿ ಇದ್ದಾಗ ಮಾತ್ರ ಅನ್ಯರಿಂದ ಗೌರವ ತೆಗೆದುಕೊಳುವುದಕ್ಕೆ ಸಾಧ್ಯ.
ಇನ್ನೊಬ್ಬರನ್ನ ಮೆಚ್ಚಿಸಲು ಬದುಕುವ ಬದುಕು ಎಂದಿಗೂ ನಮಗೆ ನೆಮ್ಮದಿಯನ್ನು ನೀಡದು.
ಬದುಕಿನಲ್ಲಿ ಶೇಕಡಾ 95 ರಷ್ಟು ಸಮಸ್ಯೆಗಳು ಸೃಷ್ಟಿಯಾಗುವುದು ನಮ್ಮ ಮಾತಿನ ಧ್ವನಿಯಿಂದ. ಏನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಹೇಳುತ್ತೇವೆ ಎನ್ನುವುದೇ ಮುಖ್ಯ. ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ.
ವಂಚನೆಯನ್ನು ಒಂದೇ ದಿನದಲ್ಲಿ ಪತ್ತೆ ಹಚ್ಚಲು ಸಾಧ್ಯ. ಆದರೆ ಪ್ರಾಮಾಣಿಕತೆಯನ್ನು ಕಾಲ, ಕಾಲ ಮಾತ್ರ ನಿರ್ಧರಿಸಬಲ್ಲದು.
ಸುಮ್ಮನೆ ಕುಳಿತುಕೊಳ್ಳುವುದರಿಂದ ಸಂತೋಷ ಅನುಭವಕ್ಕೆ ಬರುವುದಿಲ್ಲ, ಸದಾಕಾಲ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವಾಗ ಮಾತ್ರ ಸಂತೋಷ ನಮ್ಮದಾಗಿರುತ್ತದೆ.
ಎಲ್ಲರ ಸವಾಲುಗಳಿಗೆ ಉತ್ತರಿಸುತ್ತಾ ಕೂತರೆ ನಮ್ಮ ಅಮೂಲ್ಯ ಸಮಯ ಹಾಳು; ನಮ್ಮನ್ನೇ ನಾವು ಎದುರಿಸುತ್ತ ಗೆಲ್ಲತ್ತ ಸಾಗಿದರೆ ಪ್ರಶ್ನಿಸಲು ನಮ್ಮೆದುರು ಯಾರೂ ಇರುವುದಿಲ್ಲ.
ಸತ್ಯವನ್ನು ಮುಚ್ಚಿಟಷ್ಟು ವಿಶ್ವಾಸ ಕಡಿಮೆಯಾಗುತ್ತಾ ಹೋಗುತ್ತದೆ....! ಸತ್ಯವನ್ನು ಬಿಚ್ಚಿಟಷ್ಟು ವಿಶ್ವಾಸ ಬೆಳೆಯುತ್ತಾ ಹೋಗುತ್ತದೆ..!!
ನಮ್ಮ ಕೈಯಲ್ಲಿನ ಐದು ಬೆರೆಳುಗಳೇ ಸಮ ಇರುವುದಿಲ್ಲ, ಆದರೆ ಅದೇ ಕೈಯಿಂದ ಕೆಲಸವಾಗಬೇಕಾದ್ರೆ ಐದು ಬೆರಳುಗಳು ಒಟ್ಟಾಗಿ ಸೇರಲೇಬೇಕು; ಅದೇ ರೀತಿ ಒಳ್ಳೆಯ ಕೆಲಸವಾಗಬೇಕೆಂದರೆ ಸಮಾನ ಮನಸ್ಕಾರು ಇರಲೇಬೇಕೆಂದಿಲ್ಲ, ವಿಭಿನ್ನ ಮನಸ್ಕರು ಒಟ್ಟಾಗಿ ಸೇರಿದರೂ ಆ ಕೆಲಸ ಸಫಲವಾಗುತ್ತದೆ.
'ಸುಳ್ಳು' ಎಂಬುವುದು ಕೆಂಡದ ಹಾಗೆ ಹೊಳೆಯುತ್ತದೆ. ಆದರೆ ಸುಡುತ್ತದೆ, ಕ್ರಮೇಣ ಬೂದಿಯಾಗುತ್ತದೆ..... 'ಸತ್ಯ ಎಂಬುವುದು ಮಾಣಿಕ್ಯದ ಹಾಗೆ ಹೊಳೆಯುತ್ತದೆ, ಆದರೆ ಸುಡುವುದಿಲ್ಲ, ಮಹತ್ತರವಾದ ಶಾಶ್ವತ ಬೆಲೆಯನ್ನು ಹೊಂದಿರುತ್ತದೆ....
ಎಲ್ಲಿಯವರೆಗೆ ಒಂದು ಹಡಗು ಸಮುದ್ರದ ನೀರನ್ನು ತನ್ನಲ್ಲಿ ನುಗ್ಗಲು ಬಿಡುವುದಿಲ್ಲವೋ ಅಲ್ಲಿಯವರೆಗೂ ಇಡೀ ಸಮುದ್ರದ ನೀರು ಆ ಹಡಗನ್ನು ಮುಳುಗಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲಿಯವರೆಗೂ ನಾವು ನಕಾರಾತ್ಮಕ ಚಿಂತನೆಗಳಿಗೆ ನಮ್ಮಲ್ಲಿ ಪ್ರವೇಶಿಸಲು ಅನುಮತಿ ಕೊಡುವುದಿಲ್ಲವೋ ಅಲ್ಲಿಯವರೆಗೆ ನಾವು ಜೀವನದಲ್ಲಿ ಸೋಲುವುದಿಲ್ಲ.
ಪ್ರತಿಯೊಂದು ಮಗುವೂ ಒಂದು ಅನನ್ಯ ಸಾಧ್ಯತೆ. ಉಪದೇಶ ಬೇಕಿರುವುದು ಮಗುವಿಗಲ್ಲ --- ಒಂದು ಜೀವವು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಗಮನ ನೀಡಬೇಕಾದವರು ಹೆತ್ತವರು.
ತನ್ನ ತಪ್ಪನ್ನು ಒಪ್ಪಿಕೊಂಡು ಆ ತಪ್ಪನ್ನು ತಿದ್ದಿಕೊಳ್ಳುವವನು, ಬದುಕಿನಲ್ಲಿ ಯಶಸ್ಸನ್ನು ಕಾಣುವನು.
ಅಡ್ಡ ಹಾದಿಯಲ್ಲಿ ಸಾಗಿದರೆ ಬೇಗನೆ ಗುರಿ ಮುಟ್ಟಬಹುದು; ಆದರೆ, ನೇರ ಹಾದಿಯಲ್ಲಿ ನಡೆದರೆ ಸಿಗುವ ಅನುಭವ ಅಮೂಲ್ಯ.
ಸಂಬಂಧಗಳು ಹುಟ್ಟೋದು ರಕ್ತದಿಂದ, ಆದರೆ ನಮ್ಮವರು ಅನ್ನುವ ಭಾವನೆಗಳು ಹುಟ್ಟುವುದು ಮನಸ್ಸಿನಿಂದ.
ಒಬ್ಬ ಕ್ರಿಯಾಶೀಲ ವ್ಯಕ್ತಿ ಸಾಧಿಸಬೇಕೆಂಬ ಬಯಕೆಯಿಂದ ಪ್ರೇರಿತನಾಗುತ್ತಾನೆಯೇ ಹೊರತು ಇತರರನ್ನು ಮಣಿಸಬೇಕೆಂಬ ಹಂಬಲದಿಂದಲ್ಲ.
ಬದುಕಿನ ಎಲ್ಲಾ ಕಷ್ಟಗಳಿಗೂ ಎರಡು ಔಷಧಗಳಿವೆ ಒಂದು ದುಡಿಮೆ ಇನ್ನೊಂದು ತಾಳ್ಮೆ.
ನೂರು ಖುಷಿ ಸಾಲದು ಒಂದು ದುಃಖ ಮರೆಯೋಕೆ, ಆದರೆ ಒಂದು ದುಃಖ ಸಾಕು ಜೀವನ ಪೂರ್ತಿ ಕೊರಗೋಕೆ...
ಶ್ರೇಷ್ಠವಾದುದನ್ನು ಸಾಧಿಸುವ ತುಡಿತ ಇರಬೇಕು, ಜೊತೆಗೆ ಸಾಧನೆಯ ಹಾದಿಯಲ್ಲಿ ಎಡವಿದಾಗ ಎದ್ದು ನಿಲ್ಲುವ ಛಲವೂ ಇರಬೇಕು.
ಅಹಂಕಾರವು ಮನುಷ್ಯನ ಜೀವನದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಅಹಂಕಾರಿಯು ತನ್ನ ಗುರಿ ಮುಟ್ಟುವುದಿರಲಿ, ಸಾಧನೆಯ ದಾರಿಯನ್ನು ಕೂಡ ಆತ ಮರೆತುಬಿಡುತ್ತಾನೆ.
ಆತ್ಮಗೌರವಕ್ಕೂ ಅಹಂಕಾರಕ್ಕೂ ನಡುವೆ ವ್ಯತ್ಯಾಸ ತಿಳಿದುಕೊಳ್ಳದಿದ್ದರೆ ಜೀವನದಲ್ಲಿ ಎಷ್ಟೇ ಮೇಲೇರಿದರೂ ಬೆಲೆ ಇರುವುದಿಲ್ಲ.
ಚಿಕ್ಕವರಿದ್ದಾಗ ಶಾಲೆಯಲ್ಲಿ ಪಡೆಯುವ ಅಂಕಗಳಿಗೆ ಬೆಲೆ ಕೊಡುವರು, ದೊಡ್ಡವರಾದ ನಂತರ ದುಡಿಯುವ ಹಣಕ್ಕೆ ಬೆಲೆ ಕೊಡುವರು, ವಯಸ್ಸಾದ ಮೇಲೆ ಮಾಡಿರುವ ಆಸ್ತಿಗೆ ಬೆಲೆ ಕೊಡುವರು, ಆದರೆ ನಮಗೆ ಮತ್ತು ಒಳ್ಳೆಯ ತನಕ್ಕೆ ಬೆಲೆ ಕೊಡುವವರು ಅಪರೂಪ.
ಬದುಕಿನಲ್ಲಿ ಪರಮಾವಧಿಯ ತೃಪ್ತಿಯನ್ನು ಕೊಡಬಲ್ಲದು ಒಂದೇ ಒಂದು, ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ.
ಹಣ ಮಾತ್ರವಲ್ಲ ಅನುಭವ, ಗೌರವ, ಸಂಬಂಧ ಮತ್ತು ಪ್ರೀತಿ ಇವುಗಳು ಕೂಡಾ ಸಂಪಾದನೆಯೇ.
ಆರೋಗ್ಯ ಎಂದರೆ ಬರೀ ರೋಗದ ಅಭಾವವಲ್ಲ, ಬದಲಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಒಳಿತನ್ನು ಒಳಗೊಂಡಿರುವ ಒಂದು ಸಮಗ್ರ ಸ್ಥಿತಿ.
ನೀರಿನಲ್ಲಿ ನಿಂತರೂ ನಮಗೆ ಕುಡಿಯಲು ನಿರ್ಮಲವಾದ ನೀರು ಬೇಕು...! ಜನ ಸಾಗರದ ನಡುವೆ ಇದ್ದರೂ ನಮಗೆ ಜ್ಞಾನವನ್ನು ಸಂಪಾದಿಸಲು ಸಜ್ಜನರ ಸಂಗವೇ ಬೇಕು...!!
ಕಾಣುವ ದೃಶ್ಯವನ್ನು ನೋಡಿ ನಿರ್ಧರಿಸಬೇಡ, ಕಾಣದ ಸತ್ಯವನ್ನು ಅರಿತು ನಿರ್ಧರಿಸು, ದೃಶ್ಯದ ಭಾವ ಬದಲಾಗಬಹುದು, ಸತ್ಯದ ಭಾವ ಬದಲಾಗಲಾರದು...
"ನಮ್ಮಲ್ಲಿ ಸಮಸ್ಯೆ ಇದ್ದಾಗ ಅದನ್ನು ನೇರವಾಗಿ ಎದುರಿಸುವುದರಿಂದ ಪರಿಹರಿಸಬಹುದೇ ಹೊರತು, ಮರೆಮಾಚುವುದರಿಂದಲ್ಲ.
ನಿಮ್ಮ ನಂಬಿಕೆಗಳಿಂದ ನೀವು ಶ್ರೇಷ್ಠರಾಗುವುದಿಲ್ಲ; ನೀವು ಶ್ರೇಷ್ಠರೆನಿಸುವುದು ನಿಮ್ಮ ವರ್ತನೆಯಿಂದ
ಬಯಕೆಗಳು ಕಡಿಮೆ ಇದ್ದಾಗ ಕಲ್ಲು ಬಂಡೆಯ ಮೇಲೆ ಮಲಗಿದರೂ ಹಿತವಾದ ನಿದ್ರೆ ಬರುತ್ತದೆ. ಬಯಕೆಗಳು ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ
ಕೆಲವೊಮ್ಮೆ ಎಲ್ಲಿ ಅಲೆದರೂ ದೊರೆಯದ ಪ್ರಶಾಂತತೆ ನಮ್ಮ ಆಲೋಚನೆ ಬದಲಿಸಿಕೊಳ್ಳುವುದರಿಂದ ನಮ್ಮೊಳಗೇ ಸ್ಪುರಿಸುತ್ತದೆ
ಅನುಭವವಿಲ್ಲದವನ ಬರಿಮಾತು ಬಿದಿರಿನ ಬುಟ್ಟಿಯಲ್ಲಿ ನೀರು ತುಂಬಿದಂತೆ.
ನಾವು ಎಲ್ಲಾ ವಿಷಯದಲ್ಲೂ ವಾದಮಾಡಿ ಗೆಲ್ಲೋಕೆ ಆಗಲ್ಲ; ಕೆಲವು ಸಮಯದಲ್ಲಿ ಮೌನವಾಗಿದ್ದುಬಿಡಬೇಕು ನಮ್ಮ ಮೌನವೇ ಜಯ ತಂದುಕೊಡುತ್ತದೆ.
ನಾವೊಬ್ಬರೇ ಪರಸ್ಪರರ ವಿಚಾರವನ್ನು ಚಿಂತಿಸುವ ಬದಲು ಎಲ್ಲರ ಜೊತೆಗೆ ನೇರವಾಗಿ ಮಾತನಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ನಾವು ಅನುಭವಿಸುತ್ತಿರುವ ಸಂತೋಷದ ಹಿಂದೆ ನಮ್ಮ ಪೂರ್ವಜರ ಬೆವರು ಮತ್ತು ಆಶೀರ್ವಾದ ಇದೆ ಎಂಬ ಪ್ರಜ್ಞೆಯಿರಬೇಕು.
ಹಣವನ್ನು ಮಿತವಾಗಿ ಬಳಸಿದರೆ ಜೀವನದಲ್ಲಿ ನಾವು ಬೆಳೆಯುತ್ತೇವೆ; ಪದಗಳನ್ನು ಮಿತವಾಗಿ ಬಳಸಿದರೆ ಸಮಾಜದಲ್ಲಿ ನಾವು ಬೆಳೆಯುತ್ತೇವೆ.
ಸಂಬಂಧಗಳು ಯಾವುದೇ ಇರಲಿ, ಹೇಗೆ ಇರಲಿ, ಸಂಬಂಧಕ್ಕಷ್ಟೇ ಬೆಲೆ ಕೊಡಬೇಕೆ ಹೊರತು ಅವರಲ್ಲಿರುವ ಸಂಪತ್ತಿಗಲ್ಲ.
ನಮ್ಮನ್ನು ನಾವು ನಂಬಿ ನಿಂತಾಗ ನಂಬಿಕೆಯು ನಮ್ಮನ್ನು ಕೈ ಹಿಡಿದು ನಡೆಸುತ್ತದೆ; ಪರರನ್ನು ನಂಬಿ ನಿಂತಾಗ ನಂಬಿಕೆಯೇ ನಮ್ಮನ್ನು ನೋಯಿಸುತ್ತದೆ.
ಪ್ರತಿಯೊಂದು ಮಗುವೂ ಒಂದು ಅನನ್ಯ ಸಾಧ್ಯತೆ, ಉಪದೇಶ ಬೇಕಿರುವುದು ಮಗುವಿಗಲ್ಲ, ಒಂದು ಜೀವವು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಗಮನ ನೀಡಬೇಕಾದವರು ಹೆತ್ತವರು.
ಇರುವುದರೊಂದಿಗೆ ಹೊಂದಿಕೊಂಡರೆ ಪ್ರತಿ ಕ್ಷಣವೂ ಸ್ವರ್ಗ, ಇಲ್ಲದಿರುವುದಕ್ಕೆ ಹಂಬಲಿಸಿದರೆ ಪ್ರತಿ ಹೆಜ್ಜೆಯೂ ನರಕ.
ಪ್ರತಿ ಕಣ್ಣೀರಿಗೂ ಒಂದು ಕಾರಣವಿದೆ, ಅಂತೆಯೇ ಪ್ರತಿ ನಗೆಗೂ ಒಂದು ಸಂದರ್ಭವಿದೆ; ಅವು ಅಪಾರ್ಥಕ್ಕೆಡೆಯಿಲ್ಲದ ರೀತಿಯಲ್ಲಿರಲಿ.
ಕಲ್ಲುಬಂಡೆಯಿಂದ ಬೇಡವಾದ ಭಾಗವನ್ನು ತೆಗೆದುಹಾಕಿ ಸುಂದರ ಮೂರ್ತಿಯನ್ನು ಕೆತ್ತುವ ಹಾಗೇ ನಾವು ನಮ್ಮ ಮನಸ್ಸಿನಿಂದ ಬೇಡವಾದ ಕೆಟ್ಟ ವಿಚಾರಗಳನ್ನು ತೆಗೆದು ಹಾಕಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು; ಅದೇ ನೆಮ್ಮದಿಯ ಜೀವನ.
ಪಡೆದು ಕೊಳ್ಳುವುದುಕಿಂತ...! ಉಳಿಸಿ ಕೊಳ್ಳುವುದು ಮುಖ್ಯ...!! ಹುಡುಕುವುದುಕಿಂತ ಸಿಕ್ಕಿರುವುದನ್ನು ಕಳೆದು ಹೋಗದಂತೆ ಕಾಪಾಡಿ ಕೊಳ್ಳುವುದು ಮುಖ್ಯ.. !!!
ಕಣ್ಮುಂದಿನ ಅವಕಾಶವ ಕಡೆಗಣಿಸಿ ಸಿಗದ ಅವಕಾಶಕ್ಕಾಗಿ ಕಾದಾಗಲೇ ತಿಳಿದಿದ್ದು, ಕಡೆಗಣಿಸಿದ ಅವಕಾಶವೂ ಅಮೂಲ್ಯವಾದದ್ದೇ ಎಂದು.
ಯಾವಾಗಲೂ ಯೋಚಿಸಿ ಮಾತನಾಡುವುದನ್ನು ಕಲಿಯಬೇಕು, ಏಕೆಂದರೆ ನಾವಾಡಿದ ಮಾತನ್ನು ನಾವು ಮರೆತರು ಕೇಳಿಸಿಕೊಂಡವರು ಯಾವತ್ತೂ ಮರೆಯುವುದಿಲ್ಲ.
ಎಲ್ಲರಿಗೂ ಪದಗಳು ಉಚಿತವಾಗಿಯೇ ಸಿಗುತ್ತವೆ, ಆದರೆ ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುವುದರ ಮೇಲೆ ನಮ್ಮ ಮಾನವೀಯ ಮೌಲ್ಯ ನಿರ್ಧಾರವಾಗುತ್ತದೆ.
ಪ್ರತಿ ಕಣ್ಣೀರಿಗೂ ಒಂದು ಕಾರಣವಿದೆ, ಅಂತೆಯೇ ಪ್ರತಿ ನಗೆಗೂ ಒಂದು ಸಂದರ್ಭವಿದೆ; ಅವು ಅಪಾರ್ಥಕ್ಕೆಡೆಯಿಲ್ಲದ ರೀತಿಯಲ್ಲಿರಲಿ.
ದುಃಖ ನಮ್ಮನ್ನು ಹಿಂತಿರುಗಿ ನೋಡುವಂತೆ ಮಾಡುತ್ತದೆ, ಆತಂಕವು ಸುತ್ತಲೂ ನೋಡುವಂತೆ ಮಾಡುತ್ತದೆ, ಆದರೆ ಭರವಸೆ ಮಾತ್ರ ಯಾವಾಗಲು ಮುಂದೆ ನೋಡುವಂತೆ ಮಾಡುತ್ತದೆ.
ಮೆಚ್ಚುಗೆ ಮತ್ತು ಟೀಕೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಹೂವು ಅರಳಲು ಬಿಸಿಲು ಮತ್ತು ಮಳೆ ಎರಡೂ ಅಗತ್ಯ.
ಶ್ರೇಷ್ಠತೆ ಎನ್ನುವುದು ಆಡುವ ಮಾತುಗಳಿಂದ ಬರುವುದಿಲ್ಲ, ಮಾಡುವ ಕೆಲಸಗಳಿಂದ ಬರುವುದು.
ನಮ್ಮ ಬಳಿ ಎಷ್ಟು ಹಣವಿದೆ ಎಂದು ನಿಖರವಾಗಿ ಗೊತ್ತಿರುತ್ತದೆ, ಆದರೆ ನಮ್ಮ ಬಳಿ ಇರುವ ಸಮಯ ಎಷ್ಟೆಂದು ತಿಳಿಯದು; ಹಾಗಾಗಿ ಹಣಕ್ಕಿಂತ ಸಮಯಕ್ಕೇ ಹೆಚ್ಚು ಬೆಲೆ.
ಯಶಸ್ಸು ಹೀಗೆ ಬಂದು, ಹಾಗೆ ಹೋಗುವಂತಿರಬಾರದು; ಅದು ನಿಧಾನವಾಗಿ ದಕ್ಕಿ ದೀರ್ಘಕಾಲ ಉಳಿಯುವಂತಿರಬೇಕು
ಆನಂದಅತಿಯಾದ ಪ್ರೀತಿ, ಅತಿಯಾದ ನಂಬಿಕೆ ಮತ್ತು ಅತಿಯಾದ ಆಸೆ ಈ ಮೂರರಿಂದ ಬರುವ ನೋವು ಕೂಡಾ ಅತಿಯಾಗಿಯೇ ಇರುತ್ತದೆ.
ಒಂದು ಮನೆಯಲ್ಲಿ ಸುಂದರ ವಾತಾವರಣ ಸೃಷ್ಟಿ ಅಗೋದು ಪರಸ್ಪರ ಒಬ್ಬರು ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳುವುದರಿಂದ, ಎಲ್ಲರೂ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದರಿಂದ ಮತ್ತು ಸರ್ವರಿಗೂ ಒಳ್ಳೆಯದಾಗಲಿ ಎಂಬ ಸಂಕಲ್ಪಗಳನ್ನು ಮಾಡುವುದರಿಂದ.
ಸಂಬಂಧಗಳು ರಕ್ತದಿಂದ ಬೆಸೆದಿರುವುದಲ್ಲ, ನಂಬಿಕೆಯಿಂದ ಬೆಸೆದಿರುವುದು; ನಂಬಿಕೆ ಇದ್ದರೆ ಬೇರೆಯವರು ನಮ್ಮವರಾಗುತ್ತಾರೆ, ನಂಬಿಕೆ ಇಲ್ಲದಿದ್ದರೆ ನಮ್ಮವರೇ ಬೇರೆಯವರಾಗುತ್ತಾರೆ....
ಅನುಭವಗಳೇ ಜೀವನದ ಅತ್ಯಮೂಲ್ಯ ಪಾಠಗಳು, ಶಾಲೆಯಲ್ಲಿ ಕಲಿಯುವ ಪಾಠಗಳು ಶಾಲೆ ಮುಗಿಯುವವರೆಗೂ, ಜೀವನದಲ್ಲಿ ಬಿದ್ದಾಗ ಕಲಿಸುವ ಪಾಠಗಳು ಜೀವನ ಮುಗಿಯುವವರೆಗೂ....
ಸಂತೋಷದ ಬದುಕನ್ನು ಅನುಭವಿಸಬೇಕಾದರೆ ಸ್ವಾರ್ಥ ಮತ್ತು ದ್ವೇಷದಿಂದ ಕೂಡಿದ ಮನೋಭಾವವನ್ನು ದೂರ ಇಡಬೇಕು. ಪ್ರೀತಿ-ಸ್ನೇಹಗಳೇ ಮೌಲ್ಯಯುತ ಜೀವನಕ್ಕೆ ಆಧಾರ.
ಕಂಪರ್ಟ್ ಝೋನ್ ಯಶಸ್ಸಿನ ವಿರೋಧಿ; ಅದರಿಂದಾಚೆ ಹೊರ ಬಂದು ನೋಡಿ ಹೊಸ ಮಾರ್ಗಗಳಿವೆ.
ತಪ್ಪು ಹೆಜ್ಜೆ ಇಡುವುದು ಸಹಜ, ಬೇಗ ಎಚ್ಚೆತ್ತುಕೊಳ್ಳುವುದು ಬುದ್ಧಿವಂತಿಕೆ; ತಪ್ಪಾದಾಗ ಕೊರಗುವುದಕ್ಕಿಂತ, ಮುಂದೆ ತಪ್ಪಾಗದಂತೆ ನೋಡಿಕೊಳ್ಳುವುದು ಉತ್ತಮ.
ಜೀವನದಲ್ಲಿ ಸ್ನೇಹವಾಗಲಿ ಸಂಬಂಧವಾಗಲಿ ಚೆನ್ನಾಗಿರಬೇಕೆಂದರೆ ಸರಿ ತಪ್ಪುಗಳನ್ನು ಹುಡುಕಬಾರದು ಒಳ್ಳೆಯತನದಿಂದ ಸೋತು ಬಾಳುವುದೇ ನಿಜವಾದ ಜೀವನ.
ಇಷ್ಟವಾದ ಕೆಲಸವನ್ನು ಯಾರಾದರೂ ಮಾಡಬಲ್ಲರು, ಆದರೆ ಶ್ರೇಷ್ಠ ವ್ಯಕ್ತಿಗಳು ಮಾತ್ರ ಮಾಡುವ ಪ್ರತಿ ಕೆಲಸವನ್ನೂ ಇಷ್ಟಪಡುತ್ತಾರೆ.
ಇತ್ತೀಚೆಗೆ ಸದಾ ನಾವು ದೇಹದ ತೂಕದ ಬಗ್ಗೆಯೇ ಚಿಂತಿಸುತ್ತೇವೆ, ಮನಸ್ಸಿನ ಭಾರ ಇಳಿಸುವ ಬಗ್ಗೆ ಯೋಚಿಸುವುದು ಕಡಿಮೆ.
ಜೀವನದಲ್ಲಿ ಜವಾಬ್ದಾರಿ ಅನ್ನೋ ಪದ ಬಂದಾಗ ಮಾತ್ರ ಜೀವನ ಅಂದ್ರೆ ಏನು ಎಂಬುದು ಅರ್ಥವಾಗುವುದು...!
ಅತಿಯಾದ ಪ್ರೀತಿ, ಅತಿಯಾದ ನಂಬಿಕೆ ಮತ್ತು ಅತಿಯಾದ ಆಸೆ ಈ ಮೂರರಿಂದ ಬರುವ ನೋವು ಕೂಡಾ ಅತಿಯಾಗಿಯೇ ಇರುತ್ತದೆ.
ಬೇರೆಯವರ ತಪ್ಪಿಗಾಗಿ ನಾವು ಕೋಪಿಸಿಕೊಂಡರೆ ನಮ್ಮ ಮೇಲೆ ನಾವೇ ಪ್ರತೀಕಾರಕ್ಕೆ ಮುಂದಾದಂತೆ.
ಜಗತ್ತಿನಲ್ಲಿ ಪರಿಹಾರ ಇಲ್ಲದ ಸಮಸ್ಯೆಯೇ ಇಲ್ಲ; ಒಂದು ವೇಳೆ ಪರಿಹಾರವೇ ಇಲ್ಲ ಎಂದಾದರೆ ಅದು ಸಮಸ್ಯೆಯೇ ಅಲ್ಲ.
ಸೋಲು ಯಾವತ್ತೂ ಕೊನೆಯಲ್ಲ, ಅದು ನಮ್ಮ ಕಾರ್ಯತಂತ್ರ ಬದಲಾವಣೆಗೆ ಒಂದು ಅವಕಾಶ.
ಕನಸು ಮುರಿದರೆ ಮತ್ತೊಂದು ಕನಸು ಕಾಣಬಹುದು! ಆದರೆ ಮನಸ್ಸು ಮುರಿದರೆ ಮತ್ತೊಂದು ಮನಸ್ಸನ್ನು ತರಲು ಆಗುವುದಿಲ್ಲ!!
ಮನುಷ್ಯನ ತಲೆಯಲ್ಲಿ ಎರಡು ಕುದುರೆಗಳು ಓಡುತ್ತಿರುತ್ತವೆ, ಒಂದು ನಕಾರಾತ್ಮಕ, ಇನ್ನೊಂದು ಸಕಾರಾತ್ಮಕ; ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಆಹಾರ ನೀಡಿ ಬೆಳಸುವರೊ, ಅದೇ..ಗೆಲ್ಲುತ್ತದೆ.
ಬದುಕಿನಲ್ಲಿ ಸಂತೋಷವಾಗಿರಬೇಕು ಎಂದರೆ ನಮ್ಮ ಕೈಮೀರಿದ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು.
ಬದುಕಿನಲ್ಲಿ ನಾವು ಮಾಡಿಕೊಳ್ಳುವ ಆಯ್ಕೆಗಳು ನಮ್ಮ ಬದುಕಿನ ಸುಖ-ದುಃಖಗಳನ್ನು ನಿರ್ಧರಿಸತ್ತವೆ.
ಬಂಗಾರ ಇದ್ದಮಾತ್ರಕ್ಕೆ ಬದುಕು ಬಂಗಾರವಾಗುವುದಿಲ್ಲ, ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ಬಾಳು ಬಂಗಾರವಾಗುವುದು.
ಸಮುದ್ರದಷ್ಟು ಸಂಪಾದನೆ ಇದ್ದರೆ ಸಾಲದು, ಸಮಯಕ್ಕೆ ಸಹಾಯ ಮಾಡುವ ಗುಣವೂ ಇರಬೇಕು.
ಹಣವನ್ನು ಮಿತವಾಗಿ ಬಳಸಿದರೆ ಜೀವನದಲ್ಲಿ ನಾವು ಬೆಳೆಯುತ್ತೇವೆ, ಪದಗಳನ್ನು ಮಿತವಾಗಿ ಬಳಸಿದರೆ ಸಮಾಜದಲ್ಲಿ ನಾವು ಬೆಳೆಯುತ್ತೇವೆ.
ಸಿಗದ ಖುಷಿಗೆ ನನಸಾಗದ ಕನಸಿಗೆ ಆಸೆ ಪಡುವುದು ಮೂರ್ಖತನ, ಸಿಗುವ ಖುಷಿಯಲ್ಲೇ ನನಸಾಗುವ ಕನಸು ಕಟ್ಟಿ ಬದುಕುವುದೇ ಜೀವನ.
ಒಂದು ಸಂಬಂಧ ಗಟ್ಟಿಯಾಗಿ ನಿಲ್ಲೋಕೆ ಕಾರಣನೇ ನಂಬಿಕೆ, ಆ ನಂಬಿಕೆನೇ ಇಲ್ಲ ಅಂದ್ರೆ ಆ ಸಂಬಂಧಕ್ಕೆ ಬೆಲೆನೇ ಇರೋದಿಲ್ಲ.
ಹಣಕ್ಕೆ ಮರ್ಯಾದೆ ಕೊಡಬೇಕು ನಿಜ, ಆದರೆ, ಹಣಕ್ಕಾಗಿ ಮರ್ಯಾದೆ ಬಿಡಬಾರದು.
ಆಸೆ ಮತ್ತು ಅವಶ್ಯಕತೆಗಳ ಮಧ್ಯೆ ಇರುವ ಅಂತರವನ್ನು ಗ್ರಹಿಸಿ ವ್ಯವಹರಿಸಲು ಸಾಧ್ಯವಾದರೆ ಅನವಶ್ಯಕ ತೊಂದರೆಗಳು ನಮ್ಮತ್ತ ಸುಳಿಯಲಾರವು!
ಮನುಷ್ಯ ಹಣ ಉಳಿಸಲು ಕಷ್ಟಪಡುವಷ್ಟು, ಸಂಬಂಧಗಳನ್ನು ಉಳಿಸಲು ಪ್ರಯತ್ನಪಡುವುದಿಲ್ಲ.
ಬದುಕಿನಲ್ಲಿ ಭಯ ಬಲವಾದಾಗ ಬದುಕು ಭಾರವಾಗುತ್ತದೆ, ಬದುಕಿಗೆ ಭರವಸೆ ಬಲವಾದಾಗ ಬದುಕು ಬಂಗಾರವಾಗುತ್ತದೆ.
ಸರಿಯಾದ ಜೋಡಿ ಇಲ್ಲವಾದರೆ ಎಷ್ಟು ಬೆಲೆ ಬಾಳುವ ಚಪ್ಪಲಿಯಾದರೂ ವ್ಯರ್ಥ ಅಲ್ಲವೇ....? ಮನುಷ್ಯನ ಜೀವನ ಕೂಡ ಹಾಗೆಯೇ......!
ತನ್ನೊಳಗಿರುವ ನೆಮ್ಮದಿಯನ್ನು ಕಡೆಗಣಿಸಿ, ಪ್ರಪಂಚದಲ್ಲಿರುವ ಸಾಸಿವೆ ಕಾಳಷ್ಟು ಸುಖಕ್ಕೊಸ್ಕರ, ಬೆಟ್ಟದಷ್ಟು ನೋವು ಪಡುವ ಏಕೈಕ ಜೀವಿ ಅಂದ್ರೆ ಅದು ಮನುಷ್ಯ ಮಾತ್ರ.
ನಾನು ಮತ್ತಷ್ಟು ತಿಳಿಯಬೇಕು ಎಂಬುದು ಜ್ಞಾನ, ನನಗೆ ಎಲ್ಲವೂ ತಿಳಿದಿದೆ ಎನ್ನುವುದು ಅಜ್ಞಾನ, ತಾನು ತಿಳಿಯುತ್ತಾ ಪರರಿಗೆ ತಿಳಿಸುವುದು ಸುಜ್ಞಾನ......
ಎಷ್ಟೋ ವರ್ಷಗಳಿಂದ ನೀರಿನಲ್ಲಿ ಇರುವ ಕಲ್ಲು ಮೃದುವಾಗುವುದಿಲ್ಲ, ಧೈರ್ಯಶಾಲಿಯಾದವನು ಎಷ್ಟೇ ಕಷ್ಟಗಳು ಸುತ್ತಿಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ.
ಜ್ಞಾನವಿದೆ ಎಂದು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ ಜ್ಞಾನದ ಬಳಕೆಯ ದಾರಿ ತಿಳಿದವರು ಮಾತ್ರ ಯಶಸ್ವಿಯಾಗುತ್ತಾರೆ.
ಯಾವ ದಾಂಪತ್ಯದಲ್ಲಿ ತ್ಯಾಗದ ಸುವಾಸನೆ ಇರತ್ತೋ, ಆ ದಾಂಪತ್ಯ ದೀರ್ಘಕಾಲ ಬಾಳಬಲ್ಲುದು.
ಎಲ್ಲರಿಗೂ ಪದಗಳು ಉಚಿತವಾಗಿಯೇ ಸಿಗುತ್ತವೆ, ಆದರೆ ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುವುದರ ಮೇಲೆ ನಮ್ಮ ಮಾನವೀಯ ಮೌಲ್ಯ ನಿರ್ಧಾರವಾಗುತ್ತದೆ.
ವ್ಯಕ್ತಿಯನ್ನು ಬಟ್ಟೆ ಅಥವಾ ಸಂಪತ್ತಿನಿಂದ ಅಳೆಯಲು ಹೋಗಬಾರದು..! ವ್ಯಕ್ತಿಗೆ ಗುಣವೇ ಸಂಪತ್ತು..!! ಸಂಸ್ಕಾರವೇ ಐಶ್ವರ್ಯ..!!!
ನಮ್ಮ ಸಾಮರ್ಥ್ಯದ ಮಟ್ಟಕ್ಕೆ ಗುರಿಗಳನ್ನು ತಗ್ಗಿಸಬಾರದು, ನಮ್ಮ ಗುರಿಗಳ ಮಟ್ಟಕ್ಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.
ಸಂಬಂಧಗಳು ಪುಸ್ತಕವಿದ್ದಂತೆ; ಬರೆಯಲು ವರ್ಷಗಳೇ ಬೇಕು ಆದರೆ ಉರಿಯಲು ಒಂದು ಕ್ಷಣ ಸಾಕು.
ಯಾವುದೇ ಕೆಲಸದಲ್ಲಿ ಪರಿಣಿತರಾಗಲು ಒಂದೇ ಒಂದು ಮಾರ್ಗವಿದೆ, ಅದು ಪ್ರತಿದಿನ ಅಭ್ಯಾಸ ಮಾಡುವುದು...!
ಪ್ರಪಂಚದಲ್ಲಿ ಯಾವುದೇ ವಸ್ತು ಎಷ್ಟೇ ದುಬಾರಿ ಬೆಲೆ ಆಗಿರಬಹುದು, ಆದರೆ ನಿದ್ರೆ, ನೆಮ್ಮದಿ ಹಾಗೂ ಸಂತೋಷಕ್ಕೆ ಇರುವಷ್ಟು ಬೆಲೆ ಬೇರೆ ಯಾವುದೇ ವಸ್ತುವಿಗೂ ಇರೋದಿಲ್ಲ.
ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ, ಆದರೆ ಬರಿ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷವನ್ನು ಕಳೆದುಕೊಳ್ಳಬಾರದು.
ನೂತನ ಕ್ಯಾಲೆಂಡರ್ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ ದೇವರು ನಿಮಗೆಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
ಕಂಪರ್ಟ್ ಝೋನ್ ಯಶಸ್ಸಿನ ವಿರೋಧಿ; ಅದರಿಂದಾಚೆ ಹೊರ ಬಂದು ನೋಡಿ ಹೊಸ ಮಾರ್ಗಗಳಿವೆ.
ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ.
ಬದುಕು ಬರಡಾಗಿದೆ, ಎಲ್ಲ ಮುಗಿದುಹೋಗಿದೆ ಎಂದು ಹತಾಶರಾಗುವುದಕ್ಕಿಂತ, ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬಲ್ಲ ಸಾಮರ್ಥ್ಯ ನಮ್ಮಲ್ಲೇ ಅಡಗಿದೆ ಎಂಬುದನ್ನು ಗ್ರಹಿಸಿಕೊಂಡವರು ಸಾರ್ಥಕ ಹೆಜ್ಜೆಗಳನ್ನಿಡುತ್ತಾರೆ.
ಬದುಕು ಒಂದು ಪಯಣ, ಪೈಪೋಟಿಯಲ್ಲಚ ಹಾಗಾಗಿ, ಸ್ಪರ್ಧೆಗೆ ಇಳಿಯದೆ ಆನಂದವನ್ನು ಅನುಭವಿಸೋಣ.
ಸತ್ವಪರೀಕ್ಷೆ ಎಂಬುದು ಜೀವನದ ಅವಿಭಾಜ್ಯ ಅಂಗ, ಸಂಕಷ್ಟ ಎದುರಾದಾಗ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲೇ ಜಾಣತನ ಅಡಗಿದೆ.
ನಮ್ಮ ಮುಖ ಸುಂದರವಾಗಿ ಇರಲಿ ಅಥವಾ ಇಲ್ಲದಿರಲಿ, ಆದರೆ ನಾವು ಮಾತನಾಡುವ ಮಾತುಗಳು ಸುಂದರವಾಗಿರಲಿ, ಏಕೆಂದರೆ ಜನರು ಮುಖವನ್ನು ಮರೆತು ಹೋಗುತ್ತಾರೆ, ಆದರೆ ಮಾತುಗಳನ್ನು ಮರೆಯುವುದಿಲ್ಲ.
ಯಾವ ಮನುಷ್ಯನು ನಾನೇ ಸರಿ, ನಾನೇ ಶ್ರೇಷ್ಠ ಎಂದು ಮೆರೆಯುತ್ತಾನೋ, ಆತನಿಗೆ ಕೊನೆಗೆ ಉಳಿಯುವುದು ಒಂಟಿತನವಷ್ಟೇ ಮತ್ತೇನು ಅಲ್ಲ.
ಸಾಧನೆಯಿಂದ ಬದುಕಿನಲ್ಲಿ ಸಂತೋಷ ಸಿಗುತ್ತದೋ ಇಲ್ಲವೋ ಗೊತ್ತಿಲ್ಲಚ ಆದರೆ ಸಂತೋಷ ತುಂಬಿದ ಮನಸ್ಸು ದೊಡ್ಡ ಸಾಧನೆಗೆ ಮುನ್ನುಡಿ ಅನ್ನೋದಂತೂ ಸತ್ಯ.
ಜೀವನ ಎಂಬ ಅರ್ಥ ಹೊಂದಿದ ನೀರಿಗೆ ಪಾತ್ರೆಗೆ ತಕ್ಕ ಆಕಾರ ಪಡೆಯುವ ಗುಣವಿದೆ, ಪಾತ್ರೆಯ ಆಯ್ಕೆ ಸರಿಯಿರಲಿ.
ಗಿಡಕ್ಕೆ ನಿರಂತರ ನೀರೆರೆಯುತ್ತಿದ್ದರೆ ಕೆಲ ಕಾಲದ ನಂತರ ಸುಂದರ ಪುಷ್ಪಗಳಿಂದ ಕಂಗೊಳಿಸುವಂತೆ, ಇಂದು ನಾವು ಮಾಡುವ ಸತ್ಕಾರ್ಯ ಮುಂದೆ ಒಳ್ಳೆಯ ಪ್ರತಿಫಲವನ್ನೇ ನೀಡುತ್ತದೆ.
ಖಾಲಿ ಕೈಗೆ ಆಸರೆಯಾದ ಸಂಬಂಧ ಸಂಪತ್ತಿಗಿಂತ ಮೌಲ್ಯವಾದದ್ದು.
ಮುಂದುವರೆಯುತ್ತಿರುವ ವ್ಯಕ್ತಿ ಮತ್ತೊಬ್ಬರಿಗೆ ತೊಂದರೆ ಮಾಡುವುದಿಲ್ಲ;ಮತ್ತೊಬ್ಬರಿಗೆ ತೊಂದರೆ ಮಾಡುವ ವ್ಯಕ್ತಿ ಯಾವತ್ತೂ ಮುಂದುವರಿಯುವುದಿಲ್ಲ.
ಪದಗಳು ಸ್ಫೂರ್ತಿ ನೀಡಬಹುದು, ಆಲೋಚನೆಗಳು ಪ್ರಚೋದಿಸಬಹುದು; ಆದರೆ ನಾವು ಮಾಡುವ ಕೆಲಸಗಳು ಮಾತ್ರ ನಮ್ಮ ಕನಸುಗಳ ಹತ್ತಿರ ಕರೆದುಕೊಂಡು ಹೋಗುತ್ತವೆ.
ಜಗತ್ತು ನಮ್ಮನ್ನು ನೋಡಲಿ ಎಂಬ ಆಸೆಯಿಂದ ಪರ್ವತ ಏರುವ ಬದಲು, ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಏರಬೇಕು.
ನಿರೀಕ್ಷಿತ ಫಲಿತಾಂಶ ಬರಲಿಲ್ಲವೆಂದ ಮಾತ್ರಕ್ಕೆ ಪ್ರಯತ್ನಗಳಿಂದ ಹಿಂದಡಿಯಿಡುವುದು ಸಲ್ಲದ ನಡೆ; ನಿರಂತರ ಯತ್ನದಿಂದ ದೊರಕಿದ ಅನುಭವವನ್ನು ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಬೇಕು.
ಯಾವುದೇ ಕಾರ್ಯಕ್ಕೆ ಧೈರ್ಯವೊಂದಿದ್ದರೆ ಅದು ಅರ್ಧ ಸಫಲವಾದಂತೆ; ಜೀವನದ ಓಟಕ್ಕೆ, ಆಟಕ್ಕೆ ಧೈರ್ಯವೇ ಇಂಧನ; ಎಂಥ ಸ್ಥಿತಿಯಲ್ಲೂ ಧೈರ್ಯ ನಮ್ಮೊಂದಿಗಿರಲಿ.
ಒಳ್ಳೆಯದನ್ನು ಸಾಧಿಸಬೇಕೆಂದರೆ ಅದಕ್ಕೆ ಮೊದಲು ಮೆಟ್ಟಿಲಾಗಿ ಒಳ್ಳೆಯ ಚಿಂತನೆ ರೂಢಿಸಿಕೊಳ್ಳಬೇಕು.
ಆತ್ಮವಿಶ್ವಾಸ ಇರಲಿ, ಅಹಂಕಾರ ಬೇಡ, ನಾನು ಅನ್ನೋ ಧೈರ್ಯ ಇರಲಿ, ನಾನು ಮಾತ್ರನೇ ಎಂಬ ಭ್ರಮೆ ಬೇಡ.
ಬದುಕಿನ ದಾರಿಯಲ್ಲಿ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ, ಭಗವಂತ ನಕ್ಕು ನುಡಿಯುತ್ತಾನೆ, ಇದು ಬರೀ ಒಂದು ತಿರುವಷ್ಟೆ ಕೊನೆಯಲ್ಲ.
ನಾವು ಮಾಡುವ ಪ್ರತಿಯೊಂದು ಕಾರ್ಯದಿಂದ, ನಮ್ಮ ಪ್ರತಿಯೊಂದು ಆಲೋಚನೆ ಮತ್ತು ಭಾವನೆಯಿಂದ, ನಾವು ನಮ್ಮ ಸುತ್ತಲೂ ಉತ್ತಮ ವಾತಾವರಣವನ್ನು ಸೃಷ್ಟಿಸಬಹುದು.
ಯಾವುದೇ ಸಂದರ್ಭ ನಮಗೆ ಸವಾಲು ಒಡ್ಡಿದಾಗ ಮಾತ್ರ ನಮ್ಮಲ್ಲಿ ಬದಲಾವಣೆ ಸಾಧ್ಯ.
ದೀಪದ ಬೆಳಕಿನಲ್ಲಿ ಒಬ್ಬಾತ ಗೀತೆಯನ್ನು ಓದಬಲ್ಲ, ಮತ್ತೊಬ್ಬಾತ ಕಳ್ಳತನ ಮಾಡಬಲ್ಲ, ಅದು ದೀಪದ ತಪ್ಪಲ್ಲ, ಮನುಷ್ಯ ಗುಣದ ತಪ್ಪು.
ನಾವು ಒಬ್ಬರನ್ನು ನಂಬುವುದು ಮಾನವೀಯತೆ, ಆದರೆ ಅದನ್ನು ಉಳಿಸಿ ಕೊಳ್ಳುವುದು ಅವರ ಯೋಗ್ಯತೆ.
ಒಳ್ಳೆಯ ಮನಸ್ಸಿನಿಂದ ಹೇಳುವ ಪ್ರತಿಯೊಂದು ಮಾತೂ ಮೌಲ್ಯಯುತವಾಗಿದೆ, ಒಳ್ಳೆಯ ಆಲೋಚನೆಯಿಂದ ಮಾಡುವ ಪ್ರತಿಯೊಂದು ಕಾರ್ಯವು ಉಪಯುಕ್ತವಾಗಿದೆ.
ತಿಳಿವಷ್ಟೇ ಸಾಕಾಗದು, ಅದನ್ನು ಅನ್ವಯಿಸಬೇಕು; ಸಂಕಲ್ಪವೊಂದೇ ಸಾಲದು, ಕೆಲಸ ಮಾಡಬೇಕು.
ಕಾಯುತ್ತಾ ಕುಳಿತವನಿಗೆ ಒಳ್ಳೆಯ ಕಾಲ ಬರುತ್ತೊ ಇಲ್ವೋ ಗೊತ್ತಿಲ್ಲ ಆದರೆ ಬೆವರು ಹರಿಸಿ ನಿಯತ್ತಿನಿಂದ ದುಡಿಯುವನಿಗಂತೂ ಒಳ್ಳೆ ಕಾಲ ಬಂದೇ ಬರುತ್ತೆ...
ಸಂದರ್ಭ ಬಂದಾಗ, ತ್ಯಾಗ ಮಾಡಲು ಸಿದ್ಧವಾಗಿರುವಂತೆ ಮನಸ್ಸನ್ನು ಗಟ್ಟಿಗೊಳಿಸಬೇಕು ಹಾಗೂ ಸೇವೆಗೆ ಸನ್ನದ್ಧವಾಗಿರುವಂತೆ ಕೈಗಳನ್ನು ಬಲಪಡಿಸಬೇಕು.
ವೈರಿಯನ್ನೂ ಸ್ನೇಹಿತನನ್ನಾಗಿ ಪರಿವರ್ತಿಸಬಲ್ಲ ಏಕೈಕ ಶಕ್ತಿ ಪ್ರೀತಿ.
ಹಿಂದಿನ ಕಾಲದ ಜೀವನವೇ ನೆಮ್ಮದಿಯಾದದ್ದು, ಅರೋಗ್ಯವಾದದ್ದು ಮತ್ತು ಶ್ರೀಮಂತವಾದದ್ದು; ಈಗಿನ ಕಾಲದ ಜೀವನ ಅವಶ್ಯಕತೆ, ಅನಿವಾರ್ಯತೆ ಮತ್ತು ಆಡಂಬರ ಅಷ್ಟೇ.
ಉತ್ತಮವಾದದ್ದು ಶ್ರಮವಿಲ್ಲದೆ ಸಿಗುವುದಿಲ್ಲ, ಇಚ್ಚೆಯಿಲ್ಲದಿದ್ದರಂತೂ ಅದು ಸಾಧ್ಯವೇ ಇಲ್ಲ.
ಪ್ರತಿ ಕಷ್ಟವನ್ನೂ ಒಂದು ಸದಾವಕಾಶವನ್ನಾಗಿ ಬದಲಾಯಿಸಿಕೊಳ್ಳಲು ಆಶಾವಾದಿಗಳಿಗೆ ಮಾತ್ರ ಸಾಧ್ಯ.
ಬೇರೆಯವರನ್ನು ಮೆಚ್ಚಿಸುವ ಭರದಲ್ಲಿ, ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳಬೇಡಿ; ಏಕೆಂದರೆ... ಎಲ್ಲರನ್ನೂ ಮೆಚ್ಚಿಸುವ ಕಾರ್ಯ ಭಗವಂತನಿಂದಲೂ...... ಸಾಧ್ಯವಿಲ್ಲ.
ನಕಾರಾತ್ಮಕ ಚಿಂತನೆಯು ನಿಮ್ಮನ್ನು ನೀವು ಅರಿಯದ ಮಟ್ಟಿಗೆ ಹಾಳು ಮಾಡುತ್ತದೆ.
ಬದುಕು ಬರಡಾಗಿದೆ, ಎಲ್ಲ ಮುಗಿದುಹೋಗಿದೆ ಎಂದು ಹತಾಶರಾಗುವುದಕ್ಕಿಂತ, ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬಲ್ಲ ಸಾಮರ್ಥ್ಯ ನಮ್ಮಲ್ಲೇ ಅಡಗಿದೆ; ಎಂಬುದನ್ನು ಗ್ರಹಿಸಿಕೊಂಡವರು ಸಾರ್ಥಕ ಹೆಜ್ಜೆಗಳನ್ನಿಡುತ್ತಾರೆ.
ಸಾಧನೆಯಿಂದ ಬದುಕಿನಲ್ಲಿ ಸಂತೋಷ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಸಂತೋಷ ತುಂಬಿದ ಮನಸ್ಸು ದೊಡ್ಡ ಸಾಧನೆಗೆ ಮುನ್ನುಡಿ ಅನ್ನೋದಂತೂ ಸತ್ಯ.
ಸಂಬಂಧಗಳು ರಕ್ತದಿಂದ ಬೆಸೆದಿರುವುದಲ್ಲ, ನಂಬಿಕೆಯಿಂದ ಬೆಸೆದಿರುವುದು, ನಂಬಿಕೆ ಇದ್ದರೆ ಬೇರೆಯವರು ನಮ್ಮವರಾಗುತ್ತಾರೆ, ನಂಬಿಕೆ ಇಲ್ಲದಿದ್ದರೆ ನಮ್ಮವರೇ ಬೇರೆಯವರಾಗುತ್ತಾರೆ.
ಸಂಬಂಧ ಯಾವುದೇ ಇರಲಿ ನಂಬಿಕೆ ಅದರ ಅಡಿಪಾಯ ಇದ್ದಂತೆ, ನಂಬಿಕೆ ಎಷ್ಟು ಇರುತ್ತದೋ ಸಂಬಂಧ ಅಷ್ಟೇ ಗಟ್ಟಿಯಾಗಿರುತ್ತದೆ.
ಸತ್ವಪರೀಕ್ಷೆ ಎಂಬುದು ಜೀವನದ ಅವಿಭಾಜ್ಯ ಅಂಗ, ಸಂಕಷ್ಟ ಎದುರಾದಾಗ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲೇ ಜಾಣತನ ಅಡಗಿದೆ.
ಏನಾದರೂ ಒಳ್ಳೆಯ ಕೆಲಸ ಮಾಡುವುದಕ್ಕೆ ಹಪಹಪಿಸಬೇಕೇ ಹೊರತು ಒಳ್ಳೆಯವರು ಎನಿಸಿಕೊಳ್ಳುವುದಕ್ಕಲ್ಲ.
ನಮ್ಮ ನಿರ್ಗಮನ ಸಾರ್ಥಕ ರೀತಿಯದ್ದಾಗಬೇಕಾದರೆ ಬದುಕಿನುದ್ದಕ್ಕೂ ಸಹಮಾನವರ ಶ್ರೇಯಸ್ಸಿಗಾಗಿ ಶ್ರಮಿಸುವುದೊಂದೇ ಯೋಗ್ಯ ಮಾರ್ಗ.
ಒಂದು ಸತ್ಯ ಕೆಲ ಹೊತ್ತು ಬಾಧಿಸಬಹುದು, ಆದರೆ ಒಂದು ಸುಳ್ಳು ಜೀವನದುದ್ದಕ್ಕೂ ವೇದನೆ ನೀಡುತ್ತದೆ.
ಸೋಲುವುದು ಮುಖ್ಯವಲ್ಲ, ಆದರೆ ಸೋಲಿನಿಂದ ಎಷ್ಟು ಬೇಗ ಚೇತರಿಸಿಕೊಂಡಿರಿ ಎಂಬುದೇ ನಿಮ್ಮ ಸಾಮರ್ಥ್ಯವನ್ನು ನಿರೂಪಿಸುತ್ತದೆ.
ಯಾವ ಷರತ್ತುಗಳಿಲ್ಲದೆ ಹುಟ್ಟುವ ಬಾಂಧವ್ಯಕ್ಕೆ ಆಯುಷ್ಯ ಹೆಚ್ಚು, ಅಂಥ ಸಂಬಂಧವನ್ನು ಕಾಪಾಡಿಕೊಳ್ಳಲು ಸಮಯವನ್ನು ಮೀಸಲಿಡುವುದು ಜಾಣತನ.
ಪ್ರತಿ ಕಷ್ಟವನ್ನೂ ಒಂದು ಸದಾವಕಾಶವನ್ನಾಗಿ ಬದಲಾಯಿಸಿಕೊಳ್ಳಲು ಆಶಾವಾದಿಗಳಿಗೆ ಮಾತ್ರ ಸಾಧ್ಯ.
ಆಯ್ಕೆಗೆ ಅವಕಾಶವಿದ್ದಾಗ ಉತ್ತಮವಾದುದನ್ನೇ ಆಯ್ದುಕೊಳ್ಳೋಣ, ಅವಕಾಶವಿಲ್ಲವಾದರೆ ಮಾಡುವ ಕೆಲಸವೇ ಉತ್ತಮವಾಗುವಂತೆ ನೋಡಿಕೊಂಡು ಇತರರಿಗೆ ಮಾದರಿಯಾಗೋಣ!.
ಕಷ್ಟ ಬಂದಾಗ ಇದು ನನಗೊಬ್ಬನಿಗೇ ಏಕೆ ಬಂತು ಅಂದುಕೊಳ್ಳುವುದರಲ್ಲಿ ಅರ್ಥವಿಲ್ಲ, ದುಃಖವಿಲ್ಲದವರು ಇಲ್ಲವೇ ಇಲ್ಲ ಎದುರಿಸಿ ಜಯಿಸೋಣ!
ಬೇರೆಯವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಅವರ ಮಾತು ಕೇಳಿಸಿಕೊಳ್ಳಿ. ಅವರ ಹೃದಯದಲ್ಲಿ ಏನಿದೆ ಎಂದು ತಿಳಿಯಲು ಅವರ ಕೃತ್ಯಗಳನ್ನು ಗಮನಿಸಿ.
ಗುರಿಯೆಡೆಗೆ ನಮ್ಮ ನಡಿಗೆ ಎಷ್ಟೇ ನಿಧಾನವಾದರೂ ಸರಿ, ಆದರೆ ನಮ್ಮ ಪ್ರಯಾಣ ನಿಂತ ನೀರಾಗಬಾರದು.
ಪ್ರೀತಿ, ಪ್ರಾಮಾಣಿಕತೆ, ಪರಿಶ್ರಮ, ಪ್ರತಿಭೆ ಪರಾನುಭೂತಿಶಕ್ತಿಗಳನ್ನು ಒಳಗೊಂಡಿರುವಾತನೇ ನಿಜಾರ್ಥದ ಸಂಪನ್ಮೂಲ ವ್ಯಕ್ತಿ.
ಸಂಬಂಧಗಳ ನಡುವೆ ಅಡ್ಡ ಗೋಡೆ ನಿರ್ಮಿಸುವ ಮತ್ಸರ ಮತ್ತು ಅಹಂಕಾರದ ಜಾಗದಲ್ಲಿ ಹೃದಯಗಳನ್ನು ಜೋಡಿಸುವ ವಿನಯ ಮತ್ತು ಪ್ರೀತಿಯನ್ನು ಅಳವಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ.
ಒಳ್ಳೆಯವರಾಗಿ ಬಾಳುವುದು ಹಾಗೂ ಒಳ್ಳೆಯದನ್ನೇ ಮಾಡುವುದು-ಇವು ಜಗತ್ತಿಗೆ ನಾವು ಕೊಡಬಹುದಾದ ಅದ್ಭುತ ಕೊಡುಗೆಗಳು.
ಸ್ವನಂಬಿಕೆ ಮತ್ತು ಸತತ ಪ್ರಯತ್ನಗಳಿಂದಷ್ಟೇ ಯಶಸ್ಸು ಗಳಿಸಲು ಸಾಧ್ಯ.
ಬೇರೆಯವರ ತಪ್ಪಿಗಾಗಿ ನಾವು ಕೋಪಿಸಿಕೊಂಡರೆ ನಮ್ಮ ಮೇಲೆ ನಾವೇ ಪ್ರತೀಕಾರಕ್ಕೆ ಮುಂದಾದಂತೆ.
ಸಮರ್ಥನೀಯವಲ್ಲದ ವರ್ತನೆಗೆ, ಅನಗತ್ಯ ಚಿಂತನೆಗೆ ಆಸ್ಪದ ನೀಡದೇ ಸಕಾರಾತ್ಮಕ ಹೆಜ್ಜೆಗಳನ್ನಿಟ್ಟರೆ ಬಾಳು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ.
"ನಮಗಾಗಿ ಬದುಕು, ಬದುಕಿಗಾಗಿ ನಾವಲ್ಲ. ಹಾಗಾಗಿ ಬದುಕನ್ನು ಸುಂದರವಾಗಿ, ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು ಪ್ರಯತ್ನಿಸೋಣ.
ಯಶಸ್ಸು ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. ಹೃದಯ ಪೂರ್ವಕವಾಗಿ ಮಾಡುವ ಯಾವ ಕೆಲಸವೂ ವಿಫಲವಾಗುವುದಿಲ್ಲ
ನಮ್ಮ ಸ್ನೇಹ ಸಂಬಂಧವನ್ನು ಉತ್ತಮಗೊಳಿಸಲು ಒಂದಕ್ಷರ ವ್ಯತ್ಯಾಸವಷ್ಟೇ ಇರುವುದು. 'ನಾನು' ಎನ್ನದೇ 'ನಾವು' ಎಂದರೆ ಸಾಕು ಸಮಾಜ, ಜಗತ್ತು ಎಲ್ಲವೂ ಸುಂದರವಾಗಿರುತ್ತದೆ.
ನಮ್ಮ ಸ್ನೇಹ ಸಂಬಂಧವನ್ನು ಉತ್ತಮಗೊಳಿಸಲು ಒಂದಕ್ಷರ ವ್ಯತ್ಯಾಸವಷ್ಟೇ ಇರುವುದು. 'ನಾನು' ಎನ್ನದೇ 'ನಾವು' ಎಂದರೆ ಸಾಕು ಸಮಾಜ, ಜಗತ್ತು ಎಲ್ಲವೂ ಸುಂದರವಾಗಿರುತ್ತದೆ.
ಬಂಗಾರ ಇದ್ದ ಮಾತ್ರಕ್ಕೆ ಬದುಕು ಬಂಗಾರವಾಗುವುದಿಲ್ಲ. ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ಬಾಳು ಬಂಗಾರವಾಗುವುದು.
ನಮಗೆ ಎದುರಾದ ಪ್ರತಿ ಕಷ್ಟದ ಹಿಂದೆಯೂ ಒಂದು ಅವಕಾಶ ಇರುತ್ತದೆ. ಅದನ್ನು ಹುಡುಕಬೇಕಷ್ಟೇ.
ಜೀವನದಲ್ಲಿ ಯಾವುದು ಶಾಶ್ವತವಲ್ಲ ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ, ಏಕೆಂದರೆ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಅದು ಖಂಡಿತ ಬದಲಾಗುತ್ತದೆ .
ಜೀವನ ಎನ್ನುವುದು ಪ್ರೀತಿ ಮತ್ತು ನಂಬಿಕೆ ಮೇಲೆ ನಿಲ್ಲಬೇಕೇ ಹೊರತು ...... ಅನಿವಾರ್ಯತೆ, ಅವಶ್ಯಕತೆ ಹಾಗೂ ನಿರೀಕ್ಷೆಗಳ ಮೇಲಲ್ಲ...
ಕಲ್ಪನೆಯ ಸುಖದ ಹಿಂದೆ ಬಿದ್ದು... ನಿರಾಸೆಯಾಗುವುದಕ್ಕಿಂತ, ವಾಸ್ತವದ ಬದುಕಿನ ಜೊತೆಗೆ... ಸಾಗುವುದೇ ಒಳಿತು.
ಶ್ರೇಷ್ಠವಾದುದನ್ನು ಸಾಧಿಸುವ ತುಡಿತ ಇರಬೇಕು. ಜೊತೆಗೆ ಸಾಧನೆಯ ಹಾದಿಯಲ್ಲಿ ಎಡವಿದಾಗ ಎದ್ದು ನಿಲ್ಲುವ ಛಲವೂ ಇರಬೇಕು.
ಅನುಮಾನ ತಪ್ಪಾಗಬಹುದು ಆದರೆ, ಅನುಭವ ಎಂದಿಗೂ ತಪ್ಪಾಗಲ್ಲ; ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆ, ಅನುಭವ ಜೀವನದಲ್ಲಿ ನಾವು ಕಲಿತ ಪಾಠ...
ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭಗಳನ್ನು ಎದುರಿಸಿದಾಗಲೇ ನಮಗೆ ಇಷ್ಟೊಂದು ಶಕ್ತಿ ಇದೆ ಎನ್ನುವುದರ ಅರಿವಾಗುತ್ತದೆ.
ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭಗಳನ್ನು ಎದುರಿಸಿದಾಗಲೇ ನಮಗೆ ಇಷ್ಟೊಂದು ಶಕ್ತಿ ಇದೆ ಎನ್ನುವುದರ ಅರಿವಾಗುತ್ತದೆ.
ನಕಾರಾತ್ಮಕ ಚಿಂತನೆಯು ನಮ್ಮನ್ನು ನಾವು ಅರಿಯದ ಮಟ್ಟಿಗೆ ಹಾಳು ಮಾಡುತ್ತದೆ.
ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುವುದು ಮನುಷ್ಯನಿಗೆ ಅವಶ್ಯಕವಾಗಿರುತ್ತದೆ. ಸಮಯ ಕಳೆದು ಹೋದ ಮೇಲೆ ನಿರ್ಣಯ ತೆಗೆದುಕೊಂಡರೆ ಪಶ್ಚಾತ್ತಾಪ ಮತ್ತು ಆತ್ಮವಂಚನೆ ಆಗುತ್ತದೆ.
ಅಭದ್ರತೆಯೇ ಯಶಸ್ವಿನ ಮೆಟ್ಟಿಲು. ಸುರಕ್ಷಿತ ಭಾವನೆಯಲ್ಲಿ ತೇಲುವ ವ್ಯಕ್ತಿ ಎಂದಿಗೂ ಹೊಸ ಸಾಹಸಕ್ಕೆ ಕೈ ಹಾಕುವುದಿಲ್ಲ.
ಒಂದು ಒಳ್ಳೆಯ ಸ್ನೇಹ ಮತ್ತು ಪ್ರೀತಿಗೆ ಬೇಕಾಗಿರುವುದು ಕುಲ, ಗೋತ್ರ, ಅಂದ, ಚಂದವಲ್ಲ.... ಬೇಕಾಗಿರುವುದು ನಂಬಿಕೆ ಮತ್ತು ಪ್ರೀತಿ ತುಂಬಿದ ಮನಸ್ಸು.
ಈ ಪ್ರಪಂಚದಲ್ಲಿ ಯಾರೂ ಪರಿಪೂರ್ಣರಲ್ಲ; ಆದರೆ ಪರಿಪೂರ್ಣತೆಯೆಡೆಗಿನ ನಮ್ಮ ಪ್ರಯತ್ನ ನಿರಂತರವಾಗಿರಬೇಕು.
ನಮ್ಮ ಜೀವನದ ಕೊನೆಯಲ್ಲಿ ಸಾಧನೆಗಳಿಗಿಂತ ಸಂಬಂಧಗಳು ಹೆಚ್ಚು ಮುಖ್ಯವೆಂದು ನಾವು ಕಂಡುಕೊಳ್ಳುತ್ತೇವೆ.
ಓದು ವ್ಯಕ್ತಿಯನ್ನು ರೂಪಿಸುತ್ತದೆ, ಚರ್ಚೆ ಆತನನ್ನು ಸಿದ್ಧಿಗೊಳಿಸುತ್ತದೆ, ಬರವಣಿಗೆ ಆತನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತದೆ.
ಬಯಕೆಗಳು ಕಡಿಮೆ ಇದ್ದಾಗ ಕಲ್ಲು ಬಂಡೆಯ ಮೇಲೆ ಮಲಗಿದರೂ ಹಿತವಾದ ನಿದ್ರೆ ಬರುತ್ತದೆ; ಬಯಕೆಗಳು ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ.
ಕಲ್ಪನೆಯ ಸುಖದ ಹಿಂದೆ ಬಿದ್ದು ನಿರಾಸೆ ಆಗುವುದಕ್ಕಿಂತ, ವಾಸ್ತವದ ಬದುಕಿನ ಜೊತೆಗೆ ಸಾಗುವುದು ಒಳಿತು.
ಶಿಸ್ತಿನ ಮನಸ್ಸುನ್ನು ರೂಢಿಸಿಕೊಂಡರೆ ಅದು ಜೀವನದಲ್ಲಿ ಸಂತೋಷವನ್ನು ಹರಡುತ್ತದೆ.
ನಾವು ಜೀವನದಲ್ಲಿ ಸಂತೋಷ ಬಯಸುವುದಾದರೆ ನಮ್ಮ ಜೀವನವನ್ನು ಒಂದು ಗುರಿಗೆ ತಳುಕು ಹಾಕಬೇಕು. ವ್ಯಕ್ತಿ ಅಥವಾ ವಸ್ತುವಿಗಲ್ಲ.
ಮನಸ್ಸು ಆಸೆ ಪಟ್ಟಿದ್ದನ್ನೆಲ್ಲಾ ಅನುಭವಿಸುವುದು ಸ್ವಾತಂತ್ರ್ಯವಲ್ಲ. ಆಸೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ.
ಹಠ ಎಂದರೆ ನಮಗೆ ಬೇಕಾದ್ದನ್ನು ಪಡೆದು ಮೆರೆಯುವುದಲ್ಲ. ಎಲ್ಲಿ ನಮಗೆ ಬೆಲೆ ಇಲ್ಲವೋ ಅಲ್ಲಿ ನಮ್ಮ ಬೆಲೆ ಸೃಷ್ಟಿಸುವುದು. ಅದುವೇ ನಿಜವಾದ ಹಠ.
ನಾವು ಗೆಲ್ಬೇಕು ಅಂದ್ರೆ ಕಷ್ಟಗಳನ್ನು ಸಹಿಸ್ಕೋಬೇಕು, ಬದುಕ್ಬೇಕು ಅಂದ್ರೆ ಇಷ್ಟಗಳನ್ನ ಬದಲಾಯಿಸ್ಕೊಬೇಕು.
ಕೆಲವರ ಗುಣ ಏನು ಅಂತ ಗೊತ್ತಾದಾಗ ನಮ್ಮಲ್ಲಿ ನಾವೇ ಬದಲಾವಣೆ ಮಾಡಿಕೊಂಡು ಸಂತೋಷದಿಂದ ಇರಬೇಕೇ ಹೊರತು ಅವರನ್ನು ಬದಲಾಯಿಸಲು ಹೋಗಬಾರದು; ಸುಮ್ಮನೆ ಸಮಯವೂ ವ್ಯರ್ಥ.
ಹಣದಿಂದ ನೆಮ್ಮದಿ ಹುಡುಕಲು ಹೋಗಬಾರದು. ಪ್ರೀತಿ-ವಿಶ್ವಾಸದಲ್ಲಿ ನೆಮ್ಮದಿ ಹುಡುಕಬೇಕು. ನೆಮ್ಮದಿ ಇಲ್ಲದ ಜೀವನ, ಎಷ್ಟೇ ಹಣವಿದ್ದರೂ ವ್ಯರ್ಥ...
ವ್ಯಕ್ತಿಯ ಪರಿಚಯವಾಗುವುದು ಅವರ ಹೆಸರಿನಿಂದ, ಆದರೆ ಅವರ ನೆನಪು ಉಳಿಯುವುದು ಅವರ ವ್ಯಕ್ತಿತ್ವದಿಂದ.
ನಾವು ಯಾರನ್ನೇ ಕಳೆದುಕೊಂಡರೂ ಬದುಕಬಹುದು. ಆದರೆ ನಮ್ಮನ್ನು ನಾವೇ ಕಳೆದುಕೊಂಡರೆ ಬದುಕುವುದು ಕಷ್ಟ.
ಸಂಬಂಧಗಳು ತಾನಾಗಿಯೇ ದೂರಾಗುವುದಿಲ್ಲ. ಸಂಬಂಧಿಸಿದವರ ವರ್ತನೆ, ಅಹಂಕಾರ ನಿರ್ಲಕ್ಷ್ಯದಿಂದ ದೂರಾಗುತ್ತದೆ.
ಸುಂದರ ಹೂಗಳಿಂದ ಕೂಡಿದ ತೋಟವು ನೋಡಲು ಎಷ್ಟು ಆನಂದದಾಯಕವಾಗಿರುತ್ತದೆಯೋ, ಹಾಗೆಯೇ ಒಳ್ಳೆಯ ಯೋಚನೆಗಳಿಂದ ಕೂಡಿದ ಮನಸ್ಸು ಸಹ ಅಷ್ಟೇ ಆನಂದದಾಯಕವಾಗಿರುತ್ತದೆ.
ಕಳೆದು ಹೋದ ಮೇಲೆ ಪಶ್ಚಾತಾಪ ಪಡುವ ಬದಲು, ಕಳೆದು ಹೋಗದಂತೆ ನೋಡಿಕೊಳ್ಳುವುದೇ ಬುದ್ಧಿವಂತಿಕೆ.
ಬದುಕು ಇರುವುದು ಬದುಕಿ ತೋರಿಸುವುದಕ್ಕಾಗಿಯೇ ಹೊರತು ಭಯದಲ್ಲಿ ಬಾಡಿ ಹೋಗುವುದಕ್ಕಲ್ಲ..!