ನಮ್ಮ ಎರಡನೆಯ ಪುಸ್ತಕ "ಕಾಣುವಂತೆ ಕಾಣದಂತೆ" ಮೂಲಕ ಕನ್ನಡದ ಓದುಗರಿಗೆ ಇದುವರೆಗೆ ಕಂಡದ್ದು ಮತ್ತು ಕಾಣದೆ ಇರಬಹುದಾದ ಕೆಲವು ಜೀವಗಳ ಪರಿಚಯಸಲಿಕ್ಕೆ ನಮ್ಮ ತ್ರಿಲೋಕ ಬರಹ ಪ್ರಕಾಶನವು ಪ್ರಯತ್ನ ಮಾಡಿದೆ.
ನಿಮ್ಮ ಈ ಓದು ಸಮ ಸಮಾಜ ಕಟ್ಟಲು ಪ್ರೇರೇಪಿಸಿದರೆ, ಲೈಂಗಿಕ ಅಲ್ಪಸಂಖ್ಯಾತರನ್ನು ಸಮನಾಗಿ ಕಾಣುವತ್ತ ನಿಮ್ಮ ಮನಸ್ಸನ್ನು ಹರಿಯುವಂತೆ ಮಾಡಿದರೆ ಅದನ್ನು ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ಎಂದು ಖುಷಿ ಪಡುತ್ತೇವೆ. ಓದಿ, ನಿಮ್ಮ ಅನಿಸಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.
ಇಷ್ಟು ದಿನ ಕಾಣದೇ ಇದ್ದದ್ದು ಮತ್ತು ಓದಿನ ಮೂಲಕ ಕಂಡದ್ದು ಏನು ಎಂದು ತಿಳಿಯಲು ಕಾಯುತ್ತೇವೆ. ಸಿಗೋಣ, ಕಾಣುವಂತೆ ಕಾಣದಂತೆ.
೧೫೦ ರೂ.ಗಳು *ಅಂಚೆ ವೆಚ್ಚ ಉಚಿತ
ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು, ಸ್ಲಂ ಅಲ್ಲಿ ಹುಟ್ಟಿ ಬೆಳೆದವರು, ಸಂಬಂಧಗಳಿಗೆ ಬೆಲೆ ಕೊಟ್ಟು, ಸಮಾಜಕ್ಕೆ ಒಳ್ಳೆಯವರಾಗಿರಬೇಕು ಎಂದು ಬಾಳುತ್ತಿರುವ ಕುಟುಂಬದವರು ನೋಡುವ ಪರಿ ವಿಭಿನ್ನವಾಗಿರುತ್ತದೆ ಅನ್ನುವುದಾದರೆ, ನಿಮಗೆ ಈ ಕವನ ಸಂಕಲನದ ಪದ್ಯಗಳು ಅದೇ ಅನುಭವ ನೀಡುತ್ತದೆ.
೧೨೦ ರೂ.ಗಳು *ಅಂಚೆ ವೆಚ್ಚ ಉಚಿತ
ಬಳ್ಳಾರಿ ಸೀಮೆಯ ಈಗಿನ ವಿಜಯನಗರ ಜಿಲ್ಲೆಯ ಹೊಸಪೇಟೆ ಕಡೆಯವರು. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಓದಿ, ತಮ್ಮ ಓಣಿಯ ಮತ್ತು ಕುಟುಂಬದಲ್ಲೇ ಮೊದಲ ಎಂಜಿನಿಯರಿಂಗ್ ಪದವಿ ಪಡೆದವರು. Sales and marketing ನಲ್ಲಿ ಜನರೊಂದಿಗೆ ಹೆಚ್ಚು ಬೆರೆಯಬಹುದು ಎಂದು ತಿಳಿದು ಅದೇ ಪ್ರೊಫೆಷನ್ನಲ್ಲಿ career ಬೆಳೆಸುತ್ತಾ NMIMS ಕಾಲೇಜಿನಲ್ಲಿ MBA in General Management ಪದವಿಯನ್ನು ಪಡೆದರು. 8 ವರ್ಷಗಳ ಕಾಲ ಸಮಕಾಲೀನ ನೃತ್ಯ ಪ್ರಕಾರವನ್ನು Attakkalari centre for movement arts ನಲ್ಲಿ ಕಲೆತು, ಒಟ್ಟಾರೆ ಸ್ಟೇಜ್ ಮೇಲೆ ನೂರಕ್ಕೂ ಹೆಚ್ಚು ಪ್ರದರ್ಶನ ಕೊಟ್ಟಿದ್ದಾರೆ. Beru - space for anchoring arts ಸಂಸ್ಥೆಯ ಒಡನಾಡಿಯಾಗಿದ್ದಾರೆ. ಪದ್ಮಶ್ರೀ ಮಾತಾ ಬಿ ಮಂಜಮ್ಮ ಜೋಗತಿ ಪ್ರತಿಷ್ಠಾನದ ಸದಸ್ಯರು, ಸಮಾನತೆಯ ಸಂದೇಶವನ್ನು ಎಲ್ಲರಿಗು ತಲುಪಲಿ ಎಂದು ವಿಭಿನ್ನ ಕಲೆ ಪ್ರಕಾರಗಳ ಮೂಲಕ, ಸಾಹಿತ್ಯದ ಮೂಲಕ, ಜನರ ಸಮಯ ಪಡೆದು ಗಮನ ಸೆಳೆದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೇಳು ಮನಸೇ ಎನ್ನುವ ಒಂದು ವಿಶಿಷ್ಟ ಹಮ್ಮುಗೆಯನ್ನು ಗೆಳೆಯರೊಂದಿಗೆ ಸೇರಿ ಪ್ರಾರಂಭಿಸಿದ್ದಾರೆ. ಕನ್ನಡದಲ್ಲಿ ಕತೆ ಮತ್ತು ಕವನಗಳನ್ನು ಓದಿ ಹೇಳುವ ಈ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕವನಗಳನ್ನು ಬರೆಯೋದರ ಜೊತೆಗೆ ಕವನ ಓದುವಿಕೆ ಇವರಿಗೆ ಅಚ್ಚುಮೆಚ್ಚು. ವಿಕ್ರಮ ಬಿಕೆ “VikramBK” ಹೆಸರಿನ youtube channel ನಲ್ಲಿ ತಮ್ಮ ಇಷ್ಟದ ಕವನಗಳನ್ನು ಓದಿ ಪ್ರಕಟಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ.
"ಜೀವನವನ್ನು ಪ್ರತಿ ಕ್ಷಣ ಸಂಭ್ರಮಿಸಿಬೇಕು ಎನ್ನುವುದು ಇವರ ನಂಬಿಕೆ".
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : trilokabaraha@gmail.com