ಪತ್ರಿಕೆ ಬಗ್ಗೆ
'ಸಮನ್ವಯ' ಕೇವಲ ಒಂದು ಪ್ರಕಾಶನ ಸಂಸ್ಥೆಯಲ್ಲ; ಇದು ಕನ್ನಡ ಜ್ಞಾನಪರಂಪರೆ ಹಾಗೂ ಸಾಹಿತ್ಯಿಕ ಸಂಪತ್ತನ್ನು ಜಾಗತಿಕ ವಿಸ್ತಾರಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ಅಭಿಯಾನ. ಕೆನಡಾ ಸರ್ಕಾರದ 'ಲೈಬ್ರರಿ ಅಂಡ್ ಆರ್ಕೈವ್ಸ್ ಕೆನಡಾ' (LAC) ಮತ್ತು ಅಮೆರಿಕಾದ 'ಅಮೆಜಾನ್ ಸ್ಕಾಲರ್' (Amazon Scholar, USA) ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಾಚರಿಸುತ್ತಿರುವ ನಮ್ಮ ಪತ್ರಿಕೆ, ಪಾರಂಪರಿಕ ಸಾಹಿತ್ಯಿಕ ಮೌಲ್ಯಗಳನ್ನು ಸಮಕಾಲೀನ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಆಶಯ ಹೊಂದಿದೆ. ಸಾಂಪ್ರದಾಯಿಕ ಮುದ್ರಣ ಮಾಧ್ಯಮಕ್ಕೆ ಸೀಮಿತವಾಗದೆ, ಜ್ಞಾನ ವಿಸ್ತರಣೆಯ ಆಧುನಿಕ ಸಾಧ್ಯತೆಗಳನ್ನು ನಾವು ಸಕ್ರಿಯವಾಗಿ ಅಳವಡಿಸಿಕೊಳ್ಳುತ್ತಿದ್ದೇವೆ.
ನಾಡಿನ ಮೂಲೆಮೂಲೆಗಳಲ್ಲಿರುವ ಪ್ರತಿಭಾವಂತ ಬರಹಗಾರರ ಧ್ವನಿಗೆ ಜಾಗತಿಕ ಮಾನ್ಯತೆ ಕಲ್ಪಿಸುವುದು ನಮ್ಮ ಪ್ರಾಥಮಿಕ ಧ್ವೇಯ. ಕಾವ್ಯದ ಸೂಕ್ಷ್ಮ ಭಾವಲೋಕದಿಂದ ತೊಡಗಿ ಆಧುನಿಕ ವಿಜ್ಞಾನ-ತಂತ್ರಜ್ಞಾನದ ಗಹನ ವಿಷಯಗಳವರೆಗೆ ಸಾಹಿತ್ಯದ ಪ್ರತಿ ವಲಯವನ್ನೂ ನಾವು ಗೌರವಿಸುತ್ತೇವೆ. ಸಾಹಿತ್ಯ ಎಂಬುದು ಕೇವಲ ಮನೋರಂಜನೆಯ ಮಾಧ್ಯಮವಲ್ಲ; ಅದು ಸಮಾಜದ ಜೀವಂತ ಪ್ರತಿಬಿಂಬ ಹಾಗೂ ಭವಿಷ್ಯದ ದಿಕ್ಕೂಚಿ ಎಂಬುದು ನಮ್ಮ ದೃಢ ವಿಶ್ವಾಸ.
ನವೀನ ಆಲೋಚನೆಗಳು ಹಾಗೂ ಸೃಜನಶೀಲ ಚಿಂತನೆಗಳಿಗೆ 'ಸಮನ್ವಯ' ಮುಕ್ತ ವೇದಿಕೆಯಾಗಿದೆ. ಬದಲಾಗುತ್ತಿರುವ ಓದುಗರ ಅಭಿರುಚಿಗೆ ಅನುಗುಣವಾಗಿ, ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಪ್ರಭಾವವನ್ನು ವಿಸ್ತರಿಸಲು ಈ-ಪುಸ್ತಕಗಳು (E-books), ಶ್ರವಣ ಪುಸ್ತಕಗಳು (Audiobooks) ಹಾಗೂ ಸಂವಾದಾತ್ಮಕ ಲೇಖನಗಳ ಮೂಲಕ ತಲುಪಲು ಬದ್ಧರಾಗಿದ್ದೇವೆ. ಸಾಹಿತ್ಯಿಕ ಮೌಲ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ತಾಂತ್ರಿಕವಾಗಿ ಅತ್ಯುನ್ನತ ಗುಣಮಟ್ಟದ ವೇದಿಕೆಯನ್ನು ಒದಗಿಸುವುದು ನಮ್ಮ ಗುರಿ.
ಪತ್ರಿಕೆಯ ವ್ಯಾಪ್ತಿ ಮತ್ತು ಆದ್ಯತಾ ಕ್ಷೇತ್ರಗಳು (Scope & Focus)
ನಮ್ಮ ಪತ್ರಿಕೆಯು ಶಿಸ್ತುಬದ್ಧ ಹಾಗೂ ಅಂತರ್ಶಿಸ್ತುಬದ್ಧ ಸಂಶೋಧನಾ ಪ್ರಬಂಧಗಳಿಗೆ ಆದ್ಯತೆ ನೀಡುತ್ತದೆ. ಸಾಂಪ್ರದಾಯಿಕ ಸಾಹಿತ್ಯ ವಿಮರ್ಶೆಗೆ ಮಾತ್ರ ಸೀಮಿತವಾಗದೆ, ಸಮಕಾಲೀನ ಅಧ್ಯಯನಗಳನ್ನೂ ಇದು ಒಳಗೊಂಡಿದೆ. ಆಳವಾದ ಅಧ್ಯಯನ ಮತ್ತು ಶೈಕ್ಷಣಿಕ ಗಂಭೀರತೆಯನ್ನು ಹೊಂದಿರುವ ಕೆಳಗಿನ ಕ್ಷೇತ್ರಗಳ ಲೇಖನಗಳನ್ನು ಆಹ್ವಾನಿಸಲಾಗುತ್ತದೆ:
ಸಮಕಾಲೀನ ಕನ್ನಡ ಸಾಹಿತ್ಯ: ನವ್ಯೋತ್ತರ, ಬಂಡಾಯ, ದಲಿತ ಹಾಗೂ ಸ್ತ್ರೀವಾದಿ ಸಾಹಿತ್ಯದ ನೂತನ ಪರಿಕಲ್ಪನೆಗಳು, ಬರಹಗಾರರ ಅಭಿವ್ಯಕ್ತಿ ಶೈಲಿ ಮತ್ತು ಅವುಗಳ ಸಾಮಾಜಿಕ ಪ್ರಭಾವ.
ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನ: ಮೌಖಿಕ ಪರಂಪರೆ, ಪ್ರದರ್ಶನ ಕಲೆಗಳು, ದೇಶೀಯ ಜ್ಞಾನ ವ್ಯವಸ್ಥೆ ಹಾಗೂ ಪಾರಂಪರಿಕ ಆಚರಣೆಗಳ ವೈಜ್ಞಾನಿಕ ವಿಶ್ಲೇಷಣೆ.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ: ಕನ್ನಡ ಗ್ರಂಥಾಲಯಗಳ ಡಿಜಿಟಲೀಕರಣ, ಮಾಹಿತಿ ನಿರ್ವಹಣೆ ಹಾಗೂ ಬಳಕೆದಾರ-ಕೇಂದ್ರಿತ ತಾಂತ್ರಿಕ ಸಂಶೋಧನೆಗಳು.
ಭಾಷಾವಿಜ್ಞಾನ ಮತ್ತು ಅನುವಾದ ಅಧ್ಯಯನ: ಕನ್ನಡದ ಭಾಷಿಕ ರಚನೆ, ಪ್ರಾದೇಶಿಕ ಉಪಭಾಷೆಗಳ ಅಧ್ಯಯನ ಹಾಗೂ ಸಾಹಿತ್ಯಿಕ ಅನುವಾದಗಳ ಸೈದ್ಧಾಂತಿಕ ವಿಶ್ಲೇಷಣೆ.
ಇತಿಹಾಸ ಮತ್ತು ಸಾಮಾಜಿಕ-ರಾಜಕೀಯ ಅಧ್ಯಯನಗಳು: ಕರ್ನಾಟಕದ ರಾಜಕೀಯ-ಸಾಮಾಜಿಕ ವಿದ್ಯಮಾನಗಳು ಹಾಗೂ ಅವು ಸಾಹಿತ್ಯ-ಸಂಸ್ಕೃತಿಯ ಮೇಲೆ ಬೀರಿರುವ ಪರಿಣಾಮಗಳು.
ಮಾಧ್ಯಮ ಮತ್ತು ಸಂವಹನ: ಕನ್ನಡ ರಂಗಭೂಮಿ, ಚಲನಚಿತ್ರ, ದೃಶ್ಯ ಮಾಧ್ಯಮ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಕನ್ನಡದ ಅಭಿವ್ಯಕ್ತಿ ಮತ್ತು ಅದರ ಸಾಮೂಹಿಕ ಪ್ರಭಾವ.