ಹಾಯ್....! ಹಲೋ....! ನಮಸ್ತೆ...! ಬೆಳಗೆರೆಯವರ ಐವತ್ತನೇ ವರ್ಷದ ಸಂಭಾವನಾ ಗ್ರಂಥ “ಫಸ್ಟ್ ಹಾಫ್…” ಕೃತಿಯ ಕೆಲಪುಟಗಳನ್ನು ಆ ಮೂಲಕ ಬೆಳಗೆರೆಯವರ ಅನುಭವದ ನುಡಿಗಳನ್ನು ಜೊತೆ ಜೊತೆಗೇ ಹಲವು ಅಮೂಲ್ಯ ಭಾವಚಿತ್ರಗಳನ್ನೂ ಸಹಾ ಇಲ್ಲಿ ಪ್ರಕಟಿಸಲಾಗುತ್ತಿದೆ. ಬೆಳಗೆರೆಯವರ ಬಗ್ಗೆ ಈ ನಾಡಿನ ಪ್ರಮುಖ ಸಾಹಿತಿಗಳ ನುಡಿಗಳನ್ನು ಸಹಾ ಇಲ್ಲಿ ಪ್ರಕಟಿಸಲಾಗಿದೆ. ಈ ನನ್ನ ಪ್ರಯತ್ನದ ಬಗ್ಗೆ ತಮ್ಮ ಅನಿಸಿಕೆ ಹಾಗೂ ಸಲಹೆಗಳಿಗೆ ಮುಕ್ತಸ್ವಾಗತ. -ಭಾಸ್ಕರ್ ಪತ್ರಿಕೆ-ಸಾಹಿತ್ಯ ಕೃತಿಗಳ ಮೂಲಕ, ಟಿ.ವಿ-ಸಿನೆಮಾ ಮಾಧ್ಯಮಗಳ ಮೂಲಕ ಓದುಗರ-ವೀಕ್ಷಕರ ಪಾಲಿಗೆ ಸದಾ ಅಚ್ಚರಿ-ಹೊಸ ಅನುಭವಗಳನ್ನು ಸೃಷ್ಟಿಸುವ ವಿಸ್ಮಯಗಳ ಸರದಾರ ರವಿ ಬೆಳಗೆರೆ ಅವರಿಗೆ ಐವತ್ತೆರಡರ ಹರೆಯ! “ಫಸ್ಟ್ ಹಾಫ್…” ಇದು ಬೆಳಗೆರೆಯವರ ಐವತ್ತನೇ ವರ್ಷದ ಸಂಭಾವನಾ ಗ್ರಂಥ. ಬೆಳಗೆರೆ ಅವರ ಸಾಧನೆ-ಸಿದ್ದಿಗಳ ಕುರಿತು ಹೊಗಳುವವರಿಗಿಂತ, ತೆಗಳುವವರಿಗಿಂತ ಸಂಪೂರ್ಣ ಬಿನ್ನವಾಗಿ ಕಂಡವರೆಂದರೆ ಅವರ ಸಹೋದ್ಯೋಗಿಗಳು. ಇವರೆಲ್ಲರ ಅಕ್ಕರೆಯ ಕೊಡುಗೆಯೇ “ಫಸ್ಟ್ ಹಾಫ್”. “ಫಸ್ಟ್ ಹಾಫ್…” ಹೆಸರನ್ನು ಬದುಕಿನ ಮೊದಲ ಐವತ್ತು ವರ್ಷಗಳಿಂದ ಎಂಬ ಅನ್ನುವ ಅರ್ಥದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ರವಿ ಬೆಳಗೆರೆ ಅವರ ಹುಟ್ಟಿನಿಂದ ಈ ಐವತ್ತು ವರ್ಷಗಳ ಅವಧಿಯ ಸಾಧನೆ ಸಿದ್ದಿಗಳನ್ನು, ಏಳು-ಬೀಳುಗಳ ಚಿತ್ರಣವನ್ನು ಸೆರೆಹಿಡಿಯಲು ಈ ಕೃತಿಯಲ್ಲಿ ಪ್ರಯತ್ನಿಸಿಲಾಗಿದೆ. ಸಂಪಾದಕರು: ಶರತ್ ಕಲ್ಕೋಡ್ ಪರಿಕಲ್ಪನೆ ಮತ್ತು ವಿನ್ಯಾಸ: ರವಿ ಅಜ್ಜೀಪುರ, ವಿಜಯಕುಮಾರ್ ಅಮೀನಗಡ ಮುಖಪುಟ ಚಿತ್ರ: ಎಸ್.ಜಿ.ನಿವೇದಿತಾ. “Ravi Belagere is one among the best journalists in the world who writes in the Indian languages” -George Fernandes, Former Defense Minister, Govt of India. Click on the image to enlarge “ರವಿಯು ಒಬ್ಬ ಸಾಹಿತಿ, ಅನುವಾದಕ, ನಟ, ಚಿತ್ರ ನಿರ್ಮಾಪಕ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ದಾನಿ. ಈ ಹಿನ್ನೆಲೆಯಲ್ಲಿ ಅವರ ಪತ್ರಿಕಾ ಪ್ರವೃತ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮಾರ್ಗ ಒರಟಾದದ್ದು; ಆದರೆ ಒಳಮಿಡಿತ ಮತ್ತು ಗುರಿಗಳು ಬೆಳಗೆರೆ ವಂಶಕ್ಕೆ ಅನುಗುಣವಾದದ್ದು. ಅವರ ಶ್ರಮ ಶಕ್ತಿ ದೈತ್ಯ ಪ್ರಮಾಣದ್ದು. ಅವರಿಗೆ ಐವತ್ತು ವರ್ಷವೆಂದು ತಿಳಿದಾಗ ಹೌದಾ? ಎನ್ನುವಂತಹ ಆಶ್ಚರ್ಯ, ಇನ್ನೂ ಅಷ್ಟೇ ತಾನೆ ಎಂಬ ಸಮಾಧಾನ ಎರಡೂ ಒಟ್ಟಿಗೆ ಆದವು, ನಾಲ್ಕಾರು ದಶಕಗಳು ಅವರು ಹೀಗೆಯೇ ಕ್ರಿಯಾಶೀಲರಾಗಿರಲಿ. -ಡಾ. ಎಸ್.ಎಲ್.ಭೈರಪ್ಪ. ನಡೆದು ಬಂದ ಹಾದಿ (click on image to enlarge) ರವಿ ಬೆಳಗೆರೆ ಅಸಾಧಾರಣವೆನ್ನಿಸುವ ಎನರ್ಜಿಯುಳ್ಳ ಕನ್ನಡ ಬರಹಗಾರ. ಕನ್ನಡದ ಕಥಾಲೋಕದ ಪ್ರತಿಭಾವಂತರಲ್ಲಿ ಒಬ್ಬರಾದ ರವಿ ಬೆಳಗೆರೆ ಅನಿರೀಕ್ಷಿತ ದಿಕ್ಕುಗಳಲ್ಲಿ ಹೃದಯವಂತರಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. -ಡಾ. ಯು.ಆರ್.ಅನಂತಮೂರ್ತಿ Click on image to enlarge ಬದುಕಿನ ಐವತ್ತರ ಮಜಲನ್ನೇರಿ ಮೆರೆದಿರುವ ಸಾಧನಶೀಲ ರವಿ ಬೆಳಗೆರೆ ಕನ್ನಡಿಗರ ಸಾಚಾ ಅಭಿನಂದನೆಗೆ ತಕ್ಕವರು. ಅವರ ಈ ಜೀವನ ಸಾಫಲ್ಯದ ಮೇಲೇರಿಕೆ ನನ್ನಂತಹ ಲೆಕ್ಕವಿರದ ಹಿತೈಷಿಗಳ ಹಿಗ್ಗಿನ ಹೆಚ್ಚಳಕ್ಕೆ ಸೂಕ್ತ ನಿಮಿತ್ತ. ಈ ಮೇಲ್ನೆಲೆಯನ್ನು ಅವರು ಮುಟ್ಟಲು ಸುರಿಸಿರುವ ಬೆವರು, ಹೊಮ್ಮಿಸಿರುವ ಏದುಸಿರು ಮತ್ತು ಎದುರಿಸಿರುವ ಎಡರು ತೊಡರು ಅವರ ಬರವಣಿಗೆಯಲ್ಲಿ ಮನಸ್ಪರ್ಶಿಯಾಗಿ ಪಡಿಯಚ್ಚುಗೊಂಡಿದೆ. -ಪ್ರೊ. ಕೆ.ಎಸ್.ನಿಸಾರ್ ಅಹಮದ್ ನಮ್ಮ ಗದ್ಯಕ್ಕೆ ಒಂದು ದೊಡ್ಡ ಪ್ರಮಾಣದಲ್ಲಿ ಹೊಸ ಕಸುವು ಕೊಟ್ಟಿದ್ದಾರೆ ರವಿ. ಹೊಸ ಸಾಧ್ಯತೆಗಳನ್ನು ತೋರಿಸಿ ಕೊಟ್ಟಿದ್ದಾರೆ. ಮತ್ತು ಬೇಕಾದಷ್ಟು ಪ್ರೋತ್ಸಾಹಕರವಾದಂಥ ಸಂಗತಿಗಳುರವಿಯ ಬರವಣಿಗೆಯಲ್ಲಿದೆ. ಒಂದು ಹೊಸ ಗದ್ಯ ಕೊಟ್ಟಿದ್ದಾರೆ. ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೊಸ ಗದ್ಯದ ಬಗ್ಗೆ ರುಚಿಯನ್ನು ಬೆಳೆಸಿದ್ದಾರೆ ಹುಡುಗರಲ್ಲಿ. ಆಮೇಲೆ ರಾಜಕಾರಣವನ್ನ ಮತ್ತು ಆಧುನಿಕ ಜಗತ್ತನ್ನ ಹ್ಯಾಗೆ ಗ್ರಹಿಸಬೇಕು ಅನ್ನುವುದನ್ನು ಕಲಿಸಿದ್ದಾರೆ ಹಲವಾರು ಜನರಿಗೆ. ಒಬ್ಬ ಪತ್ರಕರ್ತನಾಗಿ ಅವರ ಕಾಣಿಕೆ ದೊಡ್ಡದು ಅಂತ ನನ್ನ ಭಾವನೆ. -ಡಾ. ಚಂದ್ರಶೇಖರ ಕಂಬಾರ Click on the image to enlarge ನಮ್ಮೆಲ್ಲರ ಪ್ರೀತಿಯ ಬಳ್ಳಾರಿ ಜಿಲ್ಲೆಗೆ ಹತ್ತು ಹಲವು ವಿನ್ಯಾಸದ ಸಾಂಸ್ಕೃತಿಕ ಕೋಡುಗಳನ್ನು ಮೂಡಿಸಿರುವ ರವಿ ತುಂಬಿ ಹರಿಯುತ್ತಿರುವ ಸ್ವಚ್ಚಂದ ನದಿಯಂತೆ. ಎಲ್ಲಾ ನದಿಗಳೂ ಪ್ರಪಾತದ ಹುಡುಕಾಟದಲ್ಲಿದ್ದರೆ ರವಿ ಏರುಮುಖವಾಗಿ ಹರಿಯುತ್ತಿರುವ ಗಜಗಾಮಿನಿ. ಅದನ್ನು ಆಪೋಶನ ತೆಗೆದು ಕೊಳ್ಳಲಿರುವ ಸಮುದ್ರ ಸದ್ಯ ಕಣ್ಣಳತೆಯಲ್ಲಾಗಲೀ; ಕೂಗಳತೆಯಲ್ಲಾಗಲೀ ಇಲ್ಲ. ಸಮುದ್ರಗಳನ್ನು ಗೆಲ್ಲುವ ತಾಕತ್ತು ರವಿ ಎಂಬ ನದಿಗೆ ಇದೆ. ಇವರು ನೂರ್ಕಾಲ ಆಯುರಾರೋಗ್ಯದಿಂದ ಇರಲಿ. -ಕುಂ. ವೀರಭದ್ರಪ್ಪ Click on the image to enlarge ನಿಮ್ಮದು ಅದೆಂಥಾ ದೈತ್ಯಶಕ್ತಿ ರವಿ! ಕೊಂಚವೂ ಬೋರ್ ಆಗದ ಹಲವಾರು ಲೇಖನಗಳನ್ನು ಪ್ರತಿವಾರ ಬರೆದು ಸತತವಾಗಿ ತಿಂಗಳಿಗೆ ಒಂದರಂತೆ ಕಾದಂಬರಿ ಬರೆಯುತ್ತಿರುತ್ತೀರಿ. ಅಷ್ಟಕ್ಕೇ ನಿಲ್ಲಿಸುತ್ತೀರಾ? ಸಿನಿಮಾ ನಿರ್ದೇಶನ ಮಾಡುತ್ತೀರಿ. ಸಿನಿಮಾಗಳಲ್ಲಿ ಪಾರ್ಟ್ ಮಾಡುತ್ತೀರಿ. ಟಿ.ವಿ ಪ್ರೋಗ್ರಾಮ್ ಗಳನ್ನು ನಡೆಸಿಕೊಡುತ್ತೀರಿ. ಆ ದೇವರು ಅದೆಷ್ಟು ಎನರ್ಜಿ ನಿಮ್ಮ ದೇಹದ ಕಣ ಕಣದಲ್ಲೂ ಪ್ಯಾಕ್ ಮಾಡಿ ಕಳಿಸಿರಬೇಕು ಎಂದು ಆಶ್ಚರ್ಯವಾಗುತ್ತದೆ! ನಿಮಗೆ ಐವತ್ತರ ಶುಭಾಶಯಗಳು. -ಟಿ.ಎನ್.ಸೀತಾರಾಂ Click on the image to enlarge ಅಸೀಮ ಸಾಹಸಿಗರನ್ನು, ಮಹತ್ವಾಕಾಂಕ್ಷಿಗಳಾದ ಪ್ರತಿಭಾವಂತರನ್ನು ಕುರಿತು ಹೇಳುವಾಗ ಅವರ ಪಾಲಿಗೆ Sky is the Limit ಎಂದು ಹೇಳುವುದನ್ನು ಕೇಳಿದ್ದೇವೆ. ಅದರೆ ನಮ್ಮ ಈ ಗೆಳೆಯ ರವಿಗೆ Sky is not a Limit ಎಂದೇ ಹೇಳಬಹುದು. ಸಾಹಿತ್ಯ, ಪತ್ರಿಕೋದ್ಯಮ, ದೂರದರ್ಶನ, ರೇಡಿಯೋ, ಸಿನಿಮಾ, ಶಾಲೆ, ಆಸ್ಪತ್ರೆ, ಕಾಲೇಜು…ಮುಂದೇನು? ನನ್ನ ಪ್ರಕಾರ ಇದೆಲ್ಲ ಆರಂಭ ಅಷ್ಟೆ. ಆಗಿರುವ ವಯಸ್ಸೆಷ್ಟು? ಕೇವಲ ಐವತ್ತು. ಇನ್ನೂ ಅರ್ದದಷ್ಟು ಆಯಸ್ಸಿದೆ. ಈಚಿನ ಹತ್ತು ವರ್ಷಗಳಲ್ಲಿ ನೂರಾರು ವರ್ಷಗಳನ್ನು ಅತ್ಯಂತ ಕ್ರಿಯಾಶೀಲರಾಗಿ, ಅರ್ಥ ಪೂರ್ಣವಾಗಿ, ಚೇತೋಹಾರಿಯಾಗಿ ಬದುಕಿರುವ ರವಿ ಮುಂಬರುವ ವರ್ಷಗಳನ್ನು ಈ ದಿನಗಳನ್ನು ಮೀರಿಸುವಷ್ಟು ಚೈತನ್ಯಪೂರ್ಣವಾಗಿ, ಕ್ರಿಯಾಶೀಲಾರಾಗಿ ಬದುಕುತ್ತಾರೆಂಬ ದೃಡ ನಂಬಿಕೆ ನನ್ನದು. -ಚಂದ್ರಶೇಖರ ಆಲೂರು. Click on the image to enlarge ಸಂದರ್ಶನ-೦೧ (Click on the image to enlarge) ಸಂದರ್ಶನ-೦೨ (Click on the image to enlarge) ಸಂದರ್ಶನ-೦೩ (Click on the image to enlarge) ಸಂದರ್ಶನ-೦೪ (Click on the image to enlarge) Update will Continue......Keep visiting...Thank You. |






















